Select Your Language

Notifications

webdunia
webdunia
webdunia
webdunia

ಹುತಾತ್ಮರಾದ ತಮ್ಮ ರಾಜ್ಯದ ಇಬ್ಬರು ಸೈನಿಕರಿಗೆ ತಲಾ 25ಲಕ್ಷ ರೂ.ಪರಿಹಾರ ಘೋಷಿಸಿದ ಒಡಿಶಾ ಸಿಎಂ

ಹುತಾತ್ಮರಾದ ತಮ್ಮ ರಾಜ್ಯದ ಇಬ್ಬರು ಸೈನಿಕರಿಗೆ ತಲಾ 25ಲಕ್ಷ ರೂ.ಪರಿಹಾರ ಘೋಷಿಸಿದ ಒಡಿಶಾ ಸಿಎಂ
ಒಡಿಶಾ , ಗುರುವಾರ, 18 ಜೂನ್ 2020 (07:46 IST)
Normal 0 false false false EN-US X-NONE X-NONE

ಒಡಿಶಾ : ಭಾರತ- ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ತಮ್ಮ ರಾಜ್ಯದ ಇಬ್ಬರು ಸೈನಿಕರಿಗೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಂತಾಪ ಸೂಚಿಸಿ ಯೋಧರ ಕುಟುಂಬಕ್ಕೆ ತಲಾ 25ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.

 

ಭಾರತ- ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಒಡಿಶಾದ ಕಂದಮಾಲ್ ಜಿಲ್ಲೆಯ ಬಿಯರ್ ಪಂಗದಿಂದ ಚಮದ್ರಕಾಂತ್ ಪ್ರಧಾನ್ ಮತ್ತು ರೈರಂಗ್ ಪುರದ ನಂದೂರಂ ಸೂರೆನ್ ಹುತಾತ್ಮರಾಗಿದ್ದಾರೆ.

 

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ನವೀನ್ ಪಟ್ನಾಯಕ್ , ನಮ್ಮ ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿ ಗಾಲ್ವಾನ್ ಕಣಿವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೇನೆಯ ಧೈರ್ಯಶಾಲಿಗಳಿಗೆ ಧನ್ಯವಾದ. ಈ ಯೋಧರ ಕುಟುಂಬಕ್ಕೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿ  ಇಬ್ಬರು ಯೋಧರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ  25ಲಕ್ಷ ರೂ.ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಗೆ ಕೊರೊನಾ