Select Your Language

Notifications

webdunia
webdunia
webdunia
webdunia

ಶಶಿಕಲಾ ಹೊರದಬ್ಬದೆ ಎಐಎಡಿಎಂಕೆಗೆ ಬರಲ್ಲ ಎಂದ ಪನೀರ್ ಸೆಲ್ವಂ

ಶಶಿಕಲಾ ಹೊರದಬ್ಬದೆ ಎಐಎಡಿಎಂಕೆಗೆ ಬರಲ್ಲ ಎಂದ ಪನೀರ್ ಸೆಲ್ವಂ
Chennai , ಮಂಗಳವಾರ, 18 ಏಪ್ರಿಲ್ 2017 (19:20 IST)
ಚೆನ್ನೈ: ಶಶಿಕಲಾ ನಟರಾಜನ್ ಮತ್ತು ಅವರ ಕುಟುಂಬದವರು ಪಕ್ಷ ಬಿಟ್ಟು ತೆರಳುವವರೆಗೆ ತಮ್ಮ ಬಣ ಎಐಎಡಿಎಂಕೆ ಜತೆ ವಿಲೀನವಾಗುವ ಪ್ರಶ್ನೆಯೇ ಇಲ್ಲ ಎಂದು ಒ ಪನೀರ್ ಸೆಲ್ವಂ ಸ್ಪಷ್ಟಪಡಿಸಿದ್ದಾರೆ.

 
ಪಕ್ಷದ ಉಪ ಕಾರ್ಯದರ್ಶಿ ಟಿಟಿ ದಿನಕರನ್ ಚುನಾಣಾ ಆಯೋಗಕ್ಕೆ ಹಣದ ಆಮಿಷವೊಡ್ಡಿದ್ದಾರೆಂಬ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಹಿನ್ನಲೆಯಲ್ಲಿ ಪಕ್ಷ ಹೋಳಾಗಬಹುದು ಎಂಬ ಭೀತಿಯಿಂದ ಉಭಯ ಬಣಗಳೂ ವಿಲೀನಗೊಳ್ಳುತ್ತವೆ ಎಂಬ ಸುದ್ದಿ ಹಬ್ಬಿತ್ತು.

ಇದನ್ನು ಸ್ವತಃ ಪನೀರ್ ಸೆಲ್ವಂ ಅಲ್ಲಗಳೆದಿದ್ದಾರೆ. ಅಮ್ಮ ಪಕ್ಷದಿಂದ ಹೊರ ಹಾಕಿದವರನ್ನು ಶಶಿಕಲಾ ಮತ್ತೆ ಬರ ಮಾಡಿಕೊಂಡಿದ್ದಾರೆ. ಇದನ್ನು ಒಪ್ಪಲಾಗದು. ಶಶಿಕಲಾ ಬಣ ಪಕ್ಷದಲ್ಲಿರುವರೆಗೂ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪನೀರ್ ಪಟ್ಟು ಹಿಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚುವರಿ ವರದಕ್ಷಿಣೆ ಕೋರಿದ ವರನನ್ನು ತಿರಸ್ಕರಿಸಿದ ವಧು