Publish Date: Tue, 19 Dec 2023 (13:37 IST)
Updated Date: Tue, 19 Dec 2023 (13:38 IST)
ಭಾರತದ ಭವ್ಯ ಪರಂಪರೆಯನ್ನು ನಾಶ ಮಾಡುವ ಬಿಜೆಪಿಯ ವ್ಯವಸ್ಥಿತ ಹುನ್ನಾರವಿದು. ತಾಜ್ ಮಹಲ್ ಹೆಸರನ್ನು ಅವರು ಹೇಗೆ ಕೈ ಬಿಡಲು ಸಾಧ್ಯ? ಮುಂದೊಂದು ದಿನ ಭಾರತದ ಹೆಸರನ್ನೂ ಬದಲಾಯಿಸಿದರೂ ಅಚ್ಚರಿಯಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.
ಭಾರತದ ಸಂಸ್ಕೃತಿ, ಪರಂಪರೆಯನ್ನು ನಾಶ ಮಾಡುವುದೇ ಬಿಜೆಪಿಯ ಮುಖ್ಯ ಅಜೆಂಡಾ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರವಾಸದ ವೇಳೆ ಸರಕಾರದ ಬಣ್ಣ ಬಯಲು ಮಾಡ್ತೇನೆ. ಇಂತಹ ಭ್ರಷ್ಟ ಸರಕಾರವನ್ನು ಜನತೆ ಯಾವತ್ತೂ ನೋಡಿಲ್ಲ ಎಂದು ಕಿಡಿಕಾರಿದ್ದಾರೆ.
ಕಾಮ್ ಕೀ ಬಾತ್ ಅಲ್ಲ ಲೂಟ್ ಕೀ ಬಾತ್, ಮುಖ್ಯಮಂತ್ರಿಗಳನ್ನು ಟೀಕಿಸಿ ದೊಡ್ಡವರಾಗುವ ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ
ತಾಜ್ ಮಹಲ್ ಬಗ್ಗೆ ಬಿಜೆಪಿ ನಾಯಕ ಸಂಗೀತ್ ಸೋಮ್ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ರೀತಿ ತಿರುಗೇಟು ನೀಡಿದ್ದಾರೆ.