Select Your Language

Notifications

webdunia
webdunia
webdunia
webdunia

ಕರುಣಾನಿಧಿ ಸಾವಿನ ಬಗ್ಗೆ ವದಂತಿಗಳೇ ಸುಳ್ಳು: ಡಿಎಂಕೆ

ಕರುಣಾನಿಧಿ ಸಾವಿನ ಬಗ್ಗೆ ವದಂತಿಗಳೇ ಸುಳ್ಳು: ಡಿಎಂಕೆ
ಚೆನ್ನೈ , ಬುಧವಾರ, 27 ಸೆಪ್ಟಂಬರ್ 2017 (07:11 IST)
ಚೆನ್ನೈ: ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಆರೋಗ್ಯವಾಗಿದ್ದು, ಅವರ ಸಾವಿನ ಬಗ್ಗೆ ವದಂತಿಗಳೆಲ್ಲಾ ಸುಳ್ಳು ಎಂದು ಪಕ್ಷ ಸ್ಪಷ್ಟಪಡಿಸಿದೆ.


ಇದಕ್ಕೂ ಕೆಲವು ಆನ್ ಲೈನ್ ಮಾಧ್ಯಮಗಳಲ್ಲಿ ಕರುಣಾನಿಧಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಈ ಬಗ್ಗೆ ಡಿಎಂಕೆ ಸ್ಪಷ್ಟನೆ ನೀಡಿದೆ.

‘ನಮ್ಮ ನಾಯಕ ಆರೋಗ್ಯವಾಗಿದ್ದು, ಅವರ ಸಾವಿನ ಬಗ್ಗೆ ವದಂತಿಗಳನ್ನು ನಂಬಬೇಡಿ’ ಎಂದು ಪಕ್ಷ ಪ್ರಕಟಣೆ ನೀಡಿದೆ. ಇತ್ತೀಚೆಗೆ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ಕರುಣಾನಿಧಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಏರು ಪೇರಾಗಿಲ್ಲ ಎಂದು ಡಿಎಂಕೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕ ವಯಸ್ಸಿನವಳಂತೆ ತೋರುತ್ತಿದ್ದುದಕ್ಕೆ ಮಹಿಳೆ ವಿಚಾರಣೆ!