Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆ ಮುಗಿಯುವವರೆಗೂ ಈ ಸಚಿವರಿಗೆ ವಿದೇಶ ಪ್ರವಾಸ ಭಾಗ್ಯವಿಲ್ಲ!

ಲೋಕಸಭೆ ಚುನಾವಣೆ ಮುಗಿಯುವವರೆಗೂ ಈ ಸಚಿವರಿಗೆ ವಿದೇಶ ಪ್ರವಾಸ ಭಾಗ್ಯವಿಲ್ಲ!
ಲಕ್ನೋ , ಶುಕ್ರವಾರ, 19 ಅಕ್ಟೋಬರ್ 2018 (08:36 IST)
ಲಕ್ನೋ: ಲೋಕಸಭೆ ಚುನಾವಣೆ ಮುಗಿಯುವವರೆಗೂ ತಮ್ಮ ಸಂಪುಟದ ಸಚಿವರು ವಿದೇಶ ಪ್ರವಾಸ ಮಾಡಬಾರದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಕುಂ ಹೊರಡಿಸಿದ್ದಾರೆ.

ತಮ್ಮ ತವರು ಗೋರಖ್ ಪುರಕ್ಕೆ ಭೇಟಿ ನೀಡಿದ ಸಿಎಂ ಯೋಗಿ ಈ ಘೋಷಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ವಿದೇಶ ಪ್ರವಾಸ, ಮೋಜು ಮಸ್ತಿ ಮಾಡದೇ ಮುಂದಿನ ಆರು ತಿಂಗಳ ಕಾಲ ಆದಷ್ಟು ತಮ್ಮ ಕ್ಷೇತ್ರಗಳಲ್ಲೇ ಕಾಲ ಕಳೆಯುವಂತೆ ಆದೇಶ ನೀಡಿದ್ದಾರೆ.

ಅಷ್ಟೇ ಅಲ್ಲದೆ, ತಾವೇ ಸ್ವತಃ ಈ ಕೆಲಸ ಮಾಡಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಮಾದರಿಯಾಗಲಿದ್ದಾರೆ. ಚುನಾವಣೆ ಬಗ್ಗೆ ಗಮನ ಕೇಂದ್ರೀಕರಿಸಿ ನೂರಕ್ಕೆ ನೂರು ಕೆಲಸ ಮಾಡುತ್ತಿರುವಂತೆ ಸಿಎಂ ಯೋಗಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಿ ಟೂ ಅಭಿಯಾನದ ಬಗ್ಗೆ ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ