Publish Date: Fri, 02 Aug 2019 (09:35 IST)
Updated Date: Fri, 02 Aug 2019 (09:37 IST)
ನವದೆಹಲಿ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಸ್ವಸ್ಥರಾಗಿ ವೇದಿಕೆಯಲ್ಲೇ ಕುಸಿದು ಕೂತ ಘಟನೆ ನಡೆದಿದೆ.
ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನಿತಿನ್ ಗಡ್ಕರಿ ರಾಷ್ಟ್ರಗೀತೆ ಹಾಡುವ ವೇಳೆಗೆ ಎಲ್ಲರೂ ಎದ್ದು ನಿಲ್ಲುವಾಗ ತಾವೂ ನಿಲ್ಲಲು ಹೋಗಿ ಕುಸಿದು ಕೂತಿದ್ದಾರೆ.
ತಕ್ಷಣವೇ ಅವರಿಗೆ ವೈದ್ಯೋಪಚಾರ ನಡೆಸಲಾಯಿತು. ಈಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎನ್ನಲಾಗಿದೆ.