Select Your Language

Notifications

webdunia
webdunia
webdunia
webdunia

ವಾಮಾಚಾರ ಶಂಕೆ: ಇಬ್ಬರು ಮಹಿಳೆಯರನ್ನು ಹೊಡೆದು ಕೊಂದ ನೆರೆಹೊರೆಯವರು

ವಾಮಾಚಾರ ಶಂಕೆ: ಇಬ್ಬರು ಮಹಿಳೆಯರನ್ನು ಹೊಡೆದು ಕೊಂದ ನೆರೆಹೊರೆಯವರು

Sampriya

ಸೂರಿ , ಶನಿವಾರ, 14 ಸೆಪ್ಟಂಬರ್ 2024 (17:09 IST)
ಸೂರಿ: ವಾಮಾಚಾರ ಮಾಡುತ್ತಿದ್ದಾರೆ ಎಂದು ಶಂಕಿಸಿ ಇಬ್ಬರು ಮಹಿಳೆಯರನ್ನು ನೆರೆಹೊರೆಯವರು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದಿದೆ.

 ಮಯೂರೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಯಸರ ಗ್ರಾಮದ ಬಳಿಯ ನೀರಾವರಿ ಕಾಲುವೆಯಲ್ಲಿ ಇಬ್ಬರು ಆದಿವಾಸಿ ಮಹಿಳೆಯರ ಶವಗಳು ಪತ್ತೆಯಾಗಿವೆ.  ಶುಕ್ರವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಲೊಡ್ಗಿ ಕಿಸ್ಕು ಮತ್ತು ಡಾಲಿ ಸೊರೆನ್ ಅವರನ್ನು ರಾತ್ರಿಯಲ್ಲಿ ಮನೆಯಿಂದ ಹೊರಗೆ ಕರೆದೊಯ್ದ ಜನರ ಗುಂಪೊಂದು ಹಗ್ಗಗಳಿಂದ ಕಟ್ಟಿ ನಂತರ ಅವರನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಪ್ರಾಥಮಿಕ ತನಿಖೆಯಲ್ಲಿ ವಾಮಾಚಾರ ಮಾಡುತ್ತಿದ್ದಾರೆ ಎಂದು ಶಂಕಿಸಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ತನಿಖೆ ಮುಂದುವರೆದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲು ಬೆಂಕಿ ಹಾಕಿದವರ ಮಾಹಿತಿ ನನಗಿದೆ: ಸಚಿವ ಚಲುವರಾಯಸ್ವಾಮಿ