Webdunia - Bharat's app for daily news and videos

Install App

ಮಗಳನ್ನು ಹೊಡೆದು, ಸುಟ್ಟು ಹಾಕಿದ ತಾಯಿ! ಮುಂದೇನಾಯ್ತು?

Webdunia
ಮಂಗಳವಾರ, 11 ಜನವರಿ 2022 (09:32 IST)
ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕಿಯೊಬ್ಬಳು ಹಣ ಕದ್ದ ಆರೋಪದ ಮೇಲೆ ಆಕೆಯ ತಾಯಿಯೇ ತನ್ನ ಮಗಳನ್ನು ಕೊಲೆ ಮಾಡಿದ್ದಾಳೆ.

ವೆಪ್ಪಂತಟ್ಟೈ ಗ್ರಾಮ ಆಡಳಿತಾಧಿಕಾರಿ (ವಿಎಒ) ನೀಡಿದ ದೂರಿನ ಆಧಾರದ ಮೇಲೆ ಪೆರಂಬಲೂರು ಮಹಿಳಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆ ಬಾಲಕಿಯ ಮೈಯನ್ನು ಬಿಸಿ ಚಮಚದಿಂದ ಸುಟ್ಟು, ಗಾಯಗೊಳಿಸಿದ್ದಾಳೆ. ನಂತರ ಆಕೆ ಸಾವನ್ನಪ್ಪಿದ್ದಾಳೆ.

ಪಿರ್ಯಾದಿದಾರರ ಪ್ರಕಾರ, ವೆಪ್ಪಂತಟ್ಟೈನ ತಿದೀರ್ ಕುಪ್ಪಂನಲ್ಲಿ ವಾಸವಿದ್ದ ಮಣಿಮೇಕಲೈ ಮತ್ತು ರಾಜ ಎಂಬುವವರ ಮಗಳು 70 ರೂ. ಕಳ್ಳತನ ಮಾಡಿದ್ದಳು. ಇದಕ್ಕಾಗಿ ತಾಯಿ ಮಗುವಿಗೆ ಥಳಿಸಿದ್ದರು.

ಮಗಳನ್ನು ಹೊಡೆದದ್ದೂ ಅಲ್ಲದೆ ತನ್ನ ಮಗಳ ತೊಡೆ ಮತ್ತು ತುಟಿಗಳ ಮೇಲೆ ಬಿಸಿ ಚಮಚದಿಂದ ಬರೆ ಹಾಕಿದ್ದಳು. ಅಲ್ಲದೆ, ಮೆಣಸಿನ ಪುಡಿಯನ್ನು ಮೂಗಿನ ಬಳಿ ಹಿಡಿದು ಉಸಿರಾಡಲು ಹೇಳಿದ್ದಳು ಎಂದು ದೂರುದಾರರು ಆರೋಪಿಸಿದ್ದಾರೆ.

ಈ ಘಟನೆ ಜನವರಿ 5ರಂದು ನಡೆದಿದೆ. ಇದರಿಂದ ಗಾಯಗೊಂಡ ಮಗು ಆಘಾತಕ್ಕೊಳಗಾಗಿದ್ದು, 2 ದಿನಗಳ ಕಾಲ ಊಟ ಮಾಡಲು ಸಾಧ್ಯವಾಗಿರಲಿಲ್ಲ. ಮಗುವಿಗೆ ಬಹಳ ಗಾಯಗಳಾಗಿದ್ದರಿಂದ ಹತ್ತಿರದ ಔಷಧಾಲಯದಿಂದ ಔಷಧಿಗಳನ್ನು ಖರೀದಿಸಲಾಯಿತು.

ನಂತರ ಆ ಮಗುವನ್ನು ಕೃಷ್ಣಪುರಂನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಆ ಬಾಲಕಿಯನ್ನು ತಿರುಚ್ಚಿ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments