Publish Date: Thu, 07 Dec 2017 (21:05 IST)
Updated Date: Thu, 07 Dec 2017 (21:08 IST)
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಗುಜರಾತ್ ಜನರಿಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನಸಿಂಗ್ ಆರೋಪಿಸಿದ್ದಾರೆ.
ರಾಜಕೋಟನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ಜನರು ನರೇಂದ್ರ ಮೋದಿ ಮೇಲೆ ಬಹಳಷ್ಟು ಭರವಸೆ ಇಟ್ಟುಕೊಂಡಿದ್ದರು. ನೋಟ್ ನಿಷೇಧದಿಂದ ಜೀವನ ಬದಲಾಗುತ್ತೆ ಎಂದು ನಂಬಿದ್ದರು. ಆದರೆ ಜನರ ನಂಬಿಕೆ ಮತ್ತು ಭರವಸೆಗೆ ಮೋದಿ ದ್ರೋಹ ಬಗೆದಿದ್ದಾರೆ ಎಂದು ತಿಳಿಸಿದ್ದಾರೆ.
ನೋಟು ನಿಷೇಧದ ನಂತರ ಶೇ.99ರಷ್ಟು ನಿಷೇಧಿತ ನೋಟುಗಳು ಬ್ಯಾಂಕ್ ಗಳಿಗೆ ವಾಪಸ್ ಬಂದಿವೆ, ಸಾಕಷ್ಟು ಕಪ್ಪು ಹಣ ಬಿಳಿಯಾಗಿದೆ. ಭ್ರಷ್ಟಾಚಾರ ಸಹ ಮುಂದುವರೆದಿದೆ. ನೋಟ್ ನಿಷೇಧದಿಂದ ಉದ್ಯೋಗ ವಲಯ ಸಮಸ್ಯೆ ಎದರಿಸಿತು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.