Select Your Language

Notifications

webdunia
webdunia
webdunia
webdunia

ಮತ್ತೆ ಅಟ್ಟಹಾಸ ಮೆರೆದ ಉಗ್ರರು: ಮೂವರು ಮಟ್ಯಾಶ್

ಮತ್ತೆ ಅಟ್ಟಹಾಸ ಮೆರೆದ ಉಗ್ರರು: ಮೂವರು ಮಟ್ಯಾಶ್
ಶ್ರೀನಗರ , ಗುರುವಾರ, 6 ಅಕ್ಟೋಬರ್ 2016 (09:34 IST)
ಉತ್ತರ ಕಾಶ್ಮೀರ ಭಾಗದಲ್ಲಿರುವ ಹಂದ್ವಾರ ಬಳಿಯ ಲಂಗೇಟ್‌ನಲ್ಲಿರುವ ಸೇನಾಕ್ಯಾಂಪ್‌ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.
ಇಂದು ಮುಂಜಾನೆ 5ಗಂಟೆ ಸುಮಾರಿಗೆ ಮೂವರು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಪ್ರಯತ್ನಿಸಿದ್ದರು.
 
ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಎಚ್ಚೆತ್ತುಕೊಂಡ ಉಗ್ರರನ್ನು ಎದುರಿಸಿದ ಸೈನಿಕರು ಮೂವರು ಉಗ್ರರನ್ನು ಮಟ್ಯಾಶ್
ಮಾಡಿದ್ದಾರೆ. 
 
ಉಗ್ರರು ಸೇನಾಸಮವಸ್ತ್ರದಲ್ಲಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ. 
 
ಇನ್ನೊಂದೆಡೆ ಐದಾರು ಉಗ್ರರು ಶ್ರೀನಗರಕ್ಕೆ ನುಸುಳಿದ್ದಾಳೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. 100 ಯೋಧರು ಮತ್ತು ಪೊಲೀಸರು 20 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
 
ಉತ್ತರಾಖಂಡ್‌ನಲ್ಲೂ ಕಪ್ಪು ಬಟ್ಟೆ ಧರಿಸಿದ್ದ ಶಸ್ತ್ರಾಸ್ತ್ರಧಾರಿ ಅಪರಿಚಿತರು ಓಡಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. 
ಅರಣ್ಯ ಪ್ರದೇಶದಲ್ಲಿ ಇಂತವರನ್ನು ನೋಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ. 
 
ಸರ್ಜಿಕಲ್ ಸ್ಟ್ರೈಟ್ ಬಳಿಕ ಉಗ್ರರು ಪದೇ ಪದೇ ಗಡಿಯಲ್ಲಿ  ಒಳನುಗ್ಗಲು ಪ್ರಯತ್ನಿಸುತ್ತಿರುವುದರಿಂದ ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಗಲಭೆ: ಐವರ ಸೆರೆ