Select Your Language

Notifications

webdunia
webdunia
webdunia
webdunia

ಮೇವು ಹಗರಣ; ಇಂದು ಮಧ್ಯಾಹ್ನ 3ಕ್ಕೆ ಹೊರಬರಲಿದೆ ಮಹತ್ತರ ತೀರ್ಪು

ಮೇವು ಹಗರಣ; ಇಂದು ಮಧ್ಯಾಹ್ನ 3ಕ್ಕೆ ಹೊರಬರಲಿದೆ ಮಹತ್ತರ ತೀರ್ಪು
ರಾಂಚಿ , ಶನಿವಾರ, 23 ಡಿಸೆಂಬರ್ 2017 (12:52 IST)
ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಎದುರಿಸುತ್ತಿರುವ ಮೇವು ಹಗರಣದ  ಆರು ಪ್ರಕರಣಗಳಲ್ಲಿ ಒಂದು ಪ್ರಕರಣದ ತೀರ್ಪನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. ಇಂದು ಮಧ್ಯಾಹ್ನ 3 ಗಂಟೆಗೆ ರಾಂಚಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಶಿವಪಾಲ್ ಸಿಂಗ್ ಅವರಿಂದ ಈ ತೀರ್ಪು ಪ್ರಕಟವಾಗಲಿದೆ.


1994 ಮತ್ತು 1996 ರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ , ಜಗನ್ನಾಥ್  ಮಿಶ್ರಾ ಸೇರಿದಂತೆ 34 ಮಂದಿ ಮೇವು ಖರೀದಿಗೆ ಮೀಸಲಿರಿಸಿದ್ದ ಹಣದಲ್ಲಿ 89.27ಕೋಟಿ ರೂ.ಗಳನ್ನು ದೇವಗಢ ಖಜಾನೆಯಿಂದ ಅಕ್ರಮವಾಗಿ ಪಡೆದ ಆರೋಪವನ್ನು ಎದುರಿಸುತ್ತಿದ್ದು, ಒಂದು ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರೇ ದೋಷಿಯೆಂದು 2013ರಲ್ಲಿ ತೀರ್ಪು ಹೊರಬಿದ್ದಿತ್ತು. ಅದರ ಪ್ರಕಾರ ಅವರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗು 25 ಲಕ್ಷ ದಂಡ ವಿಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ ನೀಡಿದ ಜಾಮೀನಿನ ಮೇಲೆ ಅವರು ಹೊರಬಂದಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿನೆಮಾ ನಟಿ ನಯನತಾರಾಳಂತೆ ನಟಿಸಿ ಅಪರಾಧಿಯನ್ನು ಸೆರೆಹಿಡಿದ ಪೊಲೀಸ್ ಅಧಿಕಾರಿ