Select Your Language

Notifications

webdunia
webdunia
webdunia
webdunia

ಸೈನಿಕ್ ಕಾಲೋನಿ: ಸಿಎಂ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ ನಡುವೆ ವಾಗ್ವಾದ

ಸೈನಿಕ್ ಕಾಲೋನಿ: ಸಿಎಂ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ ನಡುವೆ ವಾಗ್ವಾದ
ಶ್ರೀನಗರ್ , ಸೋಮವಾರ, 6 ಜೂನ್ 2016 (15:48 IST)
ಜಮ್ಮು ಕಾಶ್ಮಿರ ಕಣಿವೆಯಲ್ಲಿ ಸೈನಿಕ ಕಾಲೋನಿ ಸ್ಥಾಪಿಸಬೇಕು ಎನ್ನುವ ಕುರಿತಂತೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಅವರ ನಡುವೆ ನಡೆದ ಮಾತಿನ ಚಕಮಕಿ ಅಧಿವೇಶನದಲ್ಲಿ ಪ್ರತಿಧ್ವನಿಸಿತು.
 
ವಿಪಕ್ಷಗಳು ಮತ್ತು ಕೆಲ ಮಾಧ್ಯಮಗಳು ಅನಗತ್ಯವಾಗಿ ಸುಳ್ಳು ವರದಿ ಹರಡಿಸಿ ರಾಜ್ಯದಲ್ಲಿ ಶಾಂತಿಗೆ ಭಂಗ ತರುತ್ತಿವೆ ಎಂದು ಗುಡುಗಿದ ಮೆಹಬೂಬಾ ಮುಫ್ತಿ,  ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವರ ಟ್ವಿಟ್‌ಗಳ ಬಗ್ಗೆ ಕೂಡಾ ವಾಗ್ದಾಳಿ ನಡೆಸಿದರು.
 
ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಬಗ್ಗೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಬ್ದುಲ್ಲಾ ತಿರುಗೇಟು ನೀಡಿದರು.
 
ಸೇನಾಪಡೆಗಳ ಯೋಧರಿಗಾಗಿ ಸೈನಿಕ ಕಾಲೋನಿ ಸ್ಥಾಪಿಸುವ ಕುರಿತಂತೆ ಧ್ವನಿ ಎತ್ತಿದ ಶಾಸಕ ಶೇಖ್ ಅಬ್ದುಲ್ ರಶೀದ್, ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ತೋರಿಸಿದಾಗ ಸದನದಲ್ಲಿ ಕೋಲಾಹಲ ಸೃಷ್ಠಿಯಾಯಿತು. ಸರಕಾರ ಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿದವು. 
 
 
ರಾಜ್ಯದಲ್ಲಿ ಸೈನಿಕ ಕಾಲೋನಿ ಸ್ಥಾಪಿಸಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಮುಫ್ತಿ ಭರವಸೆ ನೀಡಿದ್ದರು.ಆದರೆ, ಇಂದಿನ ದಿನಪತ್ರಿಕೆಯಲ್ಲಿ ಬಂದ ಸುದ್ದಿ ಬೇರೆಯದಾಗಿದೆ. ಇದರಲ್ಲಿ ಯಾವುದೇ ಸತ್ಯ? ಕೂಡಲೇ ಬಹಿರಂಗಪಡಿಸಿ ಎಂದು ವಿಪಕ್ಷಗಳ ಸದಸ್ಯರು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಒತ್ತಾಯಿಸಿದರು.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ಮರಳಿಸಬಲ್ಲರು: ದಿಗ್ವಿಜಯ್ ಸಿಂಗ್