Webdunia - Bharat's app for daily news and videos

Install App

ರಾಜ ರಘುವಂಶಿಯನ್ನು ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ದೊಡ್ಡ ಮುನ್ನಡೆ

Krishnaveni K
ಬುಧವಾರ, 25 ಜೂನ್ 2025 (10:06 IST)
ಇಂಧೋರ್: ರಾಜ ರಘುವಂಶಿ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದೊಡ್ಡ ಮುನ್ನಡೆ ಸಿಕ್ಕಿದೆ. ಪ್ರಕರಣದಲ್ಲಿ ತಮ್ಮಿಬ್ಬರ ಪಾತ್ರವನ್ನು ಸೋನಂ ರಘುವಂಶಿ ಮತ್ತು ರಾಜ್ ಕುಶ್ವಾಹ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೋನಂಗೆ ರಾಜ ರಘುವಂಶಿಯನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಯಾಕೆಂದರೆ ಇದಕ್ಕೆ ಮೊದಲೇ ಸೋನಂಗೆ ರಾಜ್ ಕುಶ್ವಾಹ ಜೊತೆ ಸಂಬಂಧವಿತ್ತು. ಇದಕ್ಕೆ ಸೋನಂ ಕುಟುಂಬದವರಿಂದ ವಿರೋಧವಿತ್ತು. ಇದಕ್ಕಾಗಿಯೇ ಸೋನಂಗೆ ಬೇರೊಬ್ಬ ರಾಜ ರಘುವಂಶಿ ಜೊತೆ ಮದುವೆ ನಿಶ್ಚಯ ಮಾಡಿದ್ದರು.

ಆಗಲೂ ಸೋನಂ ಆತನ ಜೊತೆ ಮದುವೆ ಮಾಡಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಟುಂಬದವರಿಗೆ ಎಚ್ಚರಿಸಿದ್ದಳು. ಹಾಗಿದ್ದರೂ ಇದನ್ನು ಲೆಕ್ಕಿಸದೇ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಬಳಿಕ ಸೋನಂ ಪತಿಯಿಂದ ಅಂತರ ಕಾಯ್ದುಕೊಂಡಿದ್ದಳು. ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ರಘುವಂಶಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಅದರಂತೆ ಆತನನ್ನು ಹನಿಮೂನ್ ಗೆ ಕರೆದೊಯ್ಯುವ ನೆಪದಲ್ಲಿ ಸೋನಂ ಮೇಘಾಲಯಕ್ಕೆ ಕರೆದೊಯ್ದಿದ್ದಳು. ಅಲ್ಲಿ ರಾಜ್ ಕುಶ್ವಾಹ ಸಂಗಡಿಗರು ರಘುವಂಶಿಯನ್ನು ಮರ್ಡರ್ ಮಾಡಿದ್ದು, ಅದಕ್ಕೆ ಸೋನಂ ಕೂಡಾ ಸಹಾಯ ಮಾಡಿದ್ದಾಳೆ.

ಇದೀಗ ಸೋನಂ ಮತ್ತು ರಾಜ್ ತಮ್ಮಿಬ್ಬರ ಸಂಬಂಧ ಮತ್ತು ಮರ್ಡರ್ ಮಾಡಿರುವುದನ್ನು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಇದು ಪೊಲೀಸರಿಗೆ ದೊಡ್ಡ ಮುನ್ನಡೆಯಾಗಿದೆ. ಇದಾದ ಬಳಿಕ ಪೊಲೀಸರು ಕ್ರೈಂ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಿದ್ದು ಅವರು ಮತ್ತೆ ಘಟನಾವಳಿಗಳನ್ನು ಪುನರಾವರ್ತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈಗ ಪ್ರಕರಣದಲ್ಲಿ ಪೊಲೀಸರು ಮಹತ್ವದ ಮುನ್ನಡೆ ಪಡೆದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟ್ರೈನ್ ಟಿಕೆಟ್ ದರವೂ ಇನ್ನು ಹೆಚ್ಚಳ: ಯಾವಾಗಿನಿಂದ, ಎಷ್ಟು ಹೆಚ್ಚಾಗುತ್ತದೆ ನೋಡಿ

ತನ್ನ ಮಾತು ಕೇಳದ ಇಸ್ರೇಲ್, ಇರಾನ್ ಗೆ ಈ ಆಕ್ಷೇಪಾರ್ಹ ಪದ ಬಳಸಿದ ಡೊನಾಲ್ಡ್ ಟ್ರಂಪ್

Video: ನಮ್ಮ ಬಳಿ ದುಡ್ಡಿಲ್ಲ, ಕೇಂದ್ರ ಸರ್ಕಾರವನ್ನೇ ಕೇಳಬೇಕು: ಪರಮೇಶ್ವರ್

Karnataka weather: ಎರಡೇ ದಿನದಲ್ಲಿ ರಾಜ್ಯದ ಹವಾಮಾನದಲ್ಲಿ ಮಹತ್ವದ ಬದಲಾವಣೆ

ಆಪರೇಷನ್ ಸಿಂಧು: 3,170 ಭಾರತೀಯರು ಇಸ್ರೇಲ್‌– ಇರಾನ್‌ನಿಂದ ತಾಯ್ನಾಡಿಗೆ

ಮುಂದಿನ ಸುದ್ದಿ
Show comments