Select Your Language

Notifications

webdunia
webdunia
webdunia
webdunia

ಮಾಯಾವತಿಯಿಂದ ದೇಶದ ಮಹಿಳೆಯರಿಗೆ ಅಪಮಾನ: ದಯಾಶಂಕರ್ ಸಿಂಗ್

ಮಾಯಾವತಿಯಿಂದ ದೇಶದ ಮಹಿಳೆಯರಿಗೆ ಅಪಮಾನ: ದಯಾಶಂಕರ್ ಸಿಂಗ್
ನವದೆಹಲಿ , ಗುರುವಾರ, 21 ಜುಲೈ 2016 (18:30 IST)
ಬಹಜನ ಸಮಾಜದ ಮುಖ್ಯಸ್ಥೆ ಮಾಯಾವತಿ ಲೋಕಸಭೆಯಲ್ಲಿ ಅವಹೇಳನಾಕಾರಿ ಭಾಷಣ ಮಾಡುವ ಮೂಲಕ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿಯ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ತಿರುಗೇಟು ನೀಡಿದ್ದಾರೆ.
 
ಮಾಧ್ಯಮ ವರದಿಗಳ ಪ್ರಕಾರ, ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ದಯಾಶಂಕರ್, ವೇಶ್ಯೆಯ ಬಗ್ಗೆ ಹೇಳಿಕೆ ನೀಡುತ್ತಿರುವಾಗ ತಾಯಂದಿರು ಮತ್ತು ಸಹೋದರಿಯರ ಉಲ್ಲೇಖ ಮಾಡಿ ಅಪಮಾನ ಮಾಡಿದ್ದಾರೆ ಕಿಡಿಕಾರಿದ್ದಾರೆ.
 
ಕಳೆದ ಬುಧವಾರದಂದು ಮಾಯಾವತಿ ಲೋಕಸಭೆಯಲ್ಲಿ ಮಾತನಾಡಿ ದಯಾಶಂಕರ್ ನನ್ನನ್ನು ಅಪಮಾನಿಸಿಲ್ಲ. ತಮ್ಮ ತಾಯಿ ಮತ್ತು ಸಹೋದರಿಯರನ್ನು ಮತ್ತು ದೇಶದ ಮಹಿಳೆಯರನ್ನು ಅಪಮಾನಿಸಿದ್ದಾರೆ. ಆತನನ್ನು ಕೂಡಲೇ ಬಂಧಿಸಬೇಕು. ಒಂದು ವೇಳೆ ಜನತೆ ಸಹನೆ ಮೀರಿ ಅನಾಹುತವಾದಲ್ಲಿ ಅದಕ್ಕೆ ನಾನು ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದ್ದರು.
 
ಮಾಯಾವತಿ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ದಯಾಶಂಕರ್ ನಿರಾಕರಿಸಿದ್ದರು.
 
ಬಿಜೆಪಿ ಹೈಕಮಾಂಡ್, ದಯಾಶಂಕರ್ ಸಿಂಗ್ ಅವರನ್ನು ಇತ್ತೀಚೆಗೆ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಪಕ್ಷ ಆರು ವರ್ಷಗಳ ಕಾಲ ಉಚ್ಚಾಟಿಸಿರುವುದನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾರೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದುವರಿದ ಆತ್ಮಹತ್ಯೆ ಯತ್ನ ಸರಣಿ : ಹಾಸನ ಎಸಿ ಇ.ವಿಜಯಾ ಆತ್ಮಹತ್ಯೆಗೆ ಯತ್ನ