Select Your Language

Notifications

webdunia
webdunia
webdunia
webdunia

ಉಪಾಧ್ಯಕ್ಷೆ ಮೇಲೆ ಸಾಮೂಹಿಕ ಹಲ್ಲೆ?

ಉಪಾಧ್ಯಕ್ಷೆ ಮೇಲೆ ಸಾಮೂಹಿಕ ಹಲ್ಲೆ?
ಅಗರ್ತಲಾ , ಶುಕ್ರವಾರ, 10 ಜೂನ್ 2022 (13:58 IST)
ಅಗರ್ತಲಾ : ಬಿಜೆಪಿ ಉಪಾಧ್ಯಕ್ಷೆ ಪತಲ್ ಕನ್ಯಾ ಜಮಾತಿಯಾ ಅವರ ಮೇಲೆ ಗುರುವಾರ ಸೆಪಹಿಜಾಲಾ ಜಿಲ್ಲೆಯ ಜಂಪೂಯಿಜಾಲಾದಲ್ಲಿ ಜನರ ಗುಂಪೊಂದು ದಾಳಿ ನಡೆಸಿದೆ.

ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಗೋಮತಿ ಜಿಲ್ಲೆಯ ತೈಡುವಿನಲ್ಲಿ ಸ್ಥಳೀಯ ಜನರ ಮೇಲೆ ದಬ್ಬಾಳಿಕೆ ನಡೆಸಿದವರಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ತಿಪ್ರಾ ಮೋಥಾ ಅಧ್ಯಕ್ಷ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ಹೇಳಿದ ಕೆಲವೇ ಗಂಟೆಗಳ ನಂತರ ಪತಲ್ ಕನ್ಯಾ ಜಮಾತಿಯಾ ಅವರ ಮೇಲೆ ದಾಳಿ ನಡೆದಿದೆ. 

ಜಂಪೈಜಾಲಾದಲ್ಲಿ ಪತಲ್ ಕನ್ಯಾ ಜಮಾತಿಯಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬುಡಕಟ್ಟು ಕಲ್ಯಾಣ ಸಚಿವ ರಾಮಪಾದ, ಜಮಾತಿಯಾ ಮತ್ತು ಬಿಜೆಪಿ ಸಂಸದ ರೆಬಾಟಿ ತ್ರಿಪುರ ಅವರ ಬೆಂಗಾವಲು ಪಡೆಯನ್ನು ತಡೆದು ದಾಳಿ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕನ್ ಸಾಂಬಾರ್‌ಗಾಗಿ ಜಗಳ, ಕೊಲೆಯಲ್ಲಿ ಅಂತ್ಯ!