Select Your Language

Notifications

webdunia
webdunia
webdunia
webdunia

ನೃತ್ಯ ಮಾಡಲು ನಿರಾಕರಿಸಿದ್ದಕ್ಕೆ ಕೊಲೆ

ನೃತ್ಯ ಮಾಡಲು ನಿರಾಕರಿಸಿದ್ದಕ್ಕೆ ಕೊಲೆ
ಮುಂಬೈ , ಬುಧವಾರ, 15 ಫೆಬ್ರವರಿ 2017 (15:21 IST)
ಸಮಾಜ ಎಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ ಎಂದರೆ ಕೊಲೆಯಂತಹ ಅಪರಾಧಗಳನ್ನು ಎಸಗಲು ಕಾರಣವೇ ಬೇಕಿಲ್ಲ. ಅದಕ್ಕೊಂದು ಉತ್ತಮ ಉದಾಹರಣೆ ಮುಂಬೈನಲ್ಲಿ ನಡೆದ ಈ ಹೇಯ ಕೃತ್ಯ.

ಜನ್ಮದಿನದ ನಿಮಿತ್ತ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನು ಹತ್ಯೆಗೈದ ಅಮಾನುಷ ಘಟನೆ ಮುಂಬೈನಲ್ಲಿ ನಡೆದಿದೆ. 
 
ನಿನ್ನೆ ರಾತ್ರಿ ಈ ಕೃತ್ಯ ನಡೆದಿದ್ದು ಮೃತನನ್ನು ಅಂಕುಶ್ ಜಾಧವ್ ಎಂದು ಗುರುತಿಸಲಾಗಿದೆ.
 
ಮೃತ ಅಂಕುಶ್ ಮತ್ತು ಆತನ ಸ್ನೇಹಿತ ಕೇತನ್ ಶಿರವಾಡ್ಕರ್ ತಮ್ಮ ಕಾಮನ್ ಫ್ರೆಂಡ್ ಹುಟ್ಟುಹಬ್ಬದ ನಿಮಿತ್ತ ಸಬ್ ಅರ್ಬನ್ ಅಂಧೇರಿಯಲ್ಲಿರುವ ಆತನ ಮನೆಗೆ ಹೋಗಿದ್ದರು. ಪಾರ್ಟಿ ನಡೆಯುತ್ತಿದ್ದಾಗ ಕೇತನ್, ಅಂಕುಶ್ ಬಳಿ ನೃತ್ಯ ಮಾಡುವಂತೆ ಹೇಳಿದ್ದಾನೆ. ಆದರಾತ ನಿರಾಕರಿಸಿದ್ದಾನೆ. ಇಬ್ಬರು ಕುಡಿದ ಮತ್ತಿನಲ್ಲಿದ್ದರಿಂದ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಬಳಿಕ ಇಬ್ಬರು ಕೈ ಮಿಲಾಯಿಸಿಕೊಂಡು ಹೊಡೆದಾಡಿದ್ದಾರೆ. 
 
ಪಾರ್ಟಿಯಲ್ಲಿದ್ದ ಇತರರು ಅವರನ್ನು ಬೇರ್ಪಡಿಸಲು ಪ್ರಯತ್ನಿಸಿದರಾದರೂ, ಕುಡಿದ ಮತ್ತಿನಲ್ಲಿದ್ದ ಕೇತನ್ ಅಲ್ಲೇ ಇದ್ದ ಮರದ ಹಲಗೆಯಿಂದ ಅಂಕುಶ್ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಂಕುಶ್‌ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. 
 
ಕೊಲೆ ಆರೋಪಿ ವಿರುದ್ಧ ಐಪಿಸಿ ವಿಭಾಗ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ರೈಡ್ ಕೇಸ್: ಎಂಟಿಬಿ ನಾಗರಾಜ್ ಪರ ಸಿಎಂ ಸಿದ್ದರಾಮಯ್ಯ ಬ್ಯಾಟಿಂಗ್