Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿ ರಕ್ಷಣೆ: ಆಕೆಯನ್ನೇ ವಿವಾಹವಾಗಲು ನಿರ್ಧರಿಸಿದ ಯುವಕ

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿ ರಕ್ಷಣೆ: ಆಕೆಯನ್ನೇ ವಿವಾಹವಾಗಲು ನಿರ್ಧರಿಸಿದ ಯುವಕ
ನವದೆಹಲಿ , ಶುಕ್ರವಾರ, 7 ಜುಲೈ 2017 (16:27 IST)
ನವದೆಹಲಿ: ಇದೊಂದು ವಿಚಿತ್ರವೆಂದರೂ ಸತ್ಯ ಸಂಗತಿ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿಯೊಬ್ಬರನ್ನು ಪ್ರೀತಿಸಿದ ಯುವಕ ಕೊನೆಗೂ ಆಕೆಯನ್ನು ಪೊಲೀಸರ ಸಹಾಯದಿಂದ ರಕ್ಷಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅಷ್ಟೇ ಅಲ್ಲ ಆಕೆಯನ್ನು ವಿವಾಹವಾಗಲೂ ಯುವಕ ನಿರ್ಧರಿಸಿದ್ದಾನೆ.
 
ಶುಭಿ ಎಂಬ ಯುವತಿ ಮಾರುಕಟ್ಟೆಯೊಂದರಲ್ಲಿ ಸಾಗರ್ ಎಂಬಾತನನ್ನು ಭೇಟಿಯಾಗುತ್ತಾರೆ. ಶುಭಿಯ ಮೊದಲ ನೋಟಕ್ಕೆ ಸಾಗರ್ ಬೌಲ್ಡ್. ಬಳಿಕ ಅಕೆ ಓರ್ವ ವೇಶ್ಯೆ ಎಂದು ಸಾಗರ್ ಗೆ ತಿಳಿಯಿತು. ಆದರೂ ವಿಚಲಿತನಾಗದ ಸಾಗರ್ ಆಕೆಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ವೇಶ್ಯಾಗ್ರಹದಿಂದ ಪಾರುಮಾಡಿ ರಕ್ಷಿಸಲು ಮುಂದಾದ.  ಜಿಬಿ ರೋಡ್ ನಲ್ಲಿನ ವೇಶ್ಯಾಗ್ರಹಕ್ಕೆ ತೆರಳಿ  ಶುಭಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹಾಗೂ ಆಕೆಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಕೇಳಿದ್ದಾನೆ. ಆದರೆ ಅಲ್ಲಿನ ಮುಖ್ಯಸ್ಥ ಸಾಗರ್ ಮಾತನ್ನು ಕಿವಿಮೇಲೆ ಹಾಕಿಕೊಂಡಿಲ್ಲ.
 
ಬಳಿಕ ಸಾಗರ್ ಮಹಿಳಾ ಆಯೋಗದ ಮುಂದೆ ತನ್ನ ಕಥೆ ಹೇಳಿ. ಅವರ ಸಹಾಯಪಡೆದು ಪೊಲೀಸರ ಜತೆಗೂಡಿ ವೇಶ್ಯಾಗ್ರಹದ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿದ್ದಾನೆ. ಅಲ್ಲದೇ ಸಾಗರ್ ತಾನು ಪ್ರೀತಿಸುತ್ತಿರುವ ಶುಭಿಯನ್ನೇ ವಿವಾಹವಾಗಲು ಸಿದ್ಧತೆ ನಡೆಸಿದ್ದು, ಶುಭಿ ಹೊಸ ಜೀವನಕ್ಕೆ ಯಾವುದೇ ದಕ್ಕೆಯಾಗದಂತೆ ಪೊಲೀಸರೇ ರಕ್ಷಣೆ ನೀಡಲಿದ್ದಾರೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಗಂಡಾಂತರದಿಂದ ಪಾರಾದ ಮಹಾರಾಷ್ಟ್ರ ಸಿಎಂ