Webdunia - Bharat's app for daily news and videos

Install App

ಜೈಲಿಗೆ ಹೋಗುವುದನ್ನು ತಪ್ಪಿಸಲು ಸಾವಿನ ನಾಟಕವಾಡಿ ಸಿಕ್ಕಿಬಿದ್ದ!

Webdunia
ಸೋಮವಾರ, 13 ಡಿಸೆಂಬರ್ 2021 (09:10 IST)
ನವದೆಹಲಿ: ಪರೋಲ್ ಮೇಲೆ ಹೊರಗೆ ಬಂದಿದ್ದ ಅಪರಾಧಿ ಮರಳಿ ಜೈಲಿಗೆ ಹೋಗುವುದನ್ನು ತಪ್ಪಿಸಲು ಸಾವಿನ ನಾಟಕವಾಡಿ ಪತ್ನಿ ಸಮೇತ ಬಂಧನಕ್ಕೊಳಗಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸುದೇಶ್ ಕುಮಾರ್ ಎಂಬಾತ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ. ಕೆಲವು ದಿನಗಳ ಹಿಂದೆ ಪರೋಲ್ ಮೇಲೆ ಬಿಡುಗಡೆಯಾಗಿದ್ದ. ಆದರೆ ಮರಳಿ ಜೈಲಿಗೆ ಹೋಗುವುದನ್ನು ತಪ್ಪಿಸಲು ಪತ್ನಿಯ ಜೊತೆಗೂಡಿ ಸಾವಿನ ನಾಟಕವಾಡಿದ್ದ.

ಅದಕ್ಕಾಗಿ ತನ್ನ ಮನೆಗೆ ಕೆಲಸಕ್ಕೆ ಬಂದಿದ್ದ ನೌಕರನಿಗೆ ತನ್ನದೇ ಡ್ರೆಸ್ ತೊಡಿಸಿ ಮದ್ಯ ಕೊಡಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಕೊಲೆ ಮಾಡಿದ್ದ. ಬಳಿಕ ಆತನ ಶವದ ಮುಖವನ್ನು ಸುಟ್ಟಿ ಆತನ ಜೇಬಿನಲ್ಲಿ ತನ್ನ ಐಡೆಂಟಿಟಿ ಕಾರ್ಡ್ ಇಟ್ಟು ತಾನೇ ಸಾವನ್ನಪ್ಪಿದಂತೆ ಕತೆ ಸೃಷ್ಟಿಸಿದ್ದ.

ಪೊಲೀಸರು ಮೃತದೇಹ ಗುರುತು ಹಚ್ಚಲು ಪತ್ನಿಗೆ ಹೇಳಿದಾಗ ಆಕೆ ನೀಡಿದ ಹೇಳಿಕೆ ಸಂಶಯಕ್ಕೀಡು ಮಾಡಿತ್ತು. ಹೀಗಾಗಿ ತನಿಖೆ ನಡೆಸಿದಾಗ ಗಂಡ-ಹೆಂಡಿರ ನಾಟಕ ಬಯಲಾಯ್ತು. ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments