Webdunia - Bharat's app for daily news and videos

Install App

ಪಹಲ್ಗಾಮ್ ಗೆ ಇಂಟೆಲಿಜೆನ್ಸ್ ವರದಿ ಪಡೆದು ಮೋದಿ ಹೋಗಿರಲಿಲ್ಲ, ಸಾಮಾನ್ಯರ ಕತೆಯೇನು: ಮಲ್ಲಿಕಾರ್ಜುನ ಖರ್ಗೆ

Krishnaveni K
ಮಂಗಳವಾರ, 6 ಮೇ 2025 (17:07 IST)
ನವದೆಹಲಿ: ಇತ್ತೀಚೆಗೆ ಉಗ್ರ ದಾಳಿಯಾದ ಪಹಲ್ಗಾಮ್ ಗೆ ಇಂಟೆಲಿಜೆನ್ಸ್ ವರದಿಯ ಎಚ್ಚರಿಕೆ ಹಿನ್ನಲೆಯಲ್ಲಿ ಮೋದಿ ಹೋಗಿರಲಿಲ್ಲ. ಆದರೆ ಸಾಮಾನ್ಯರ ಕತೆಯೇನು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ವಾಗ್ದಾಳಿ ನಡೆಸಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾಗುವ ಮೂರು ದಿನಗಳ ಮೊದಲು ಪ್ರಧಾನಿ ಮೋದಿ ಜಮ್ಮು ಕಾಶ್ಮೀರಕ್ಕೆ ತೆರಳಬೇಕಿತ್ತು. ಆದರೆ ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂದು ಗುಪ್ತಚರ ವರದಿಗಳು ಹೇಳಿದ್ದವು. ಹೀಗಾಗಿ ಅವರು ಪ್ರವಾಸ ರದ್ದುಗೊಳಿಸಿದರು.

ಹೀಗಾಗಿ ಗುಪ್ತಚರ ಸಂಸ್ಥೆಗಳಿಗೆ ಇಲ್ಲಿ ಅಪಾಯವಿದೆ ಎನ್ನುವುದು ಮೊದಲೇ ಗೊತ್ತಿತ್ತು. ಹಾಗಿದ್ದರೂ ಯಾಕೆ ಸುರಕ್ಷತೆ ಕೈಗೊಳ್ಳಲಿಲ್ಲ. ಪಹಲ್ಗಾಮ್ ಉಗ್ರ ದಾಳಿ ಗುಪ್ತಚರ ಇಲಾಖೆಯ ವೈಫಲ್ಯವಲ್ಲದೆ ಇನ್ನೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಈ ದಾಳಿಗೆ ಕೇಂದ್ರ ಕೂಡಾ ಉತ್ತರದಾಯಿ. ಗುಪ್ತಚರ ವರದಿಯಿದ್ದರೂ ಸಾಮಾನ್ಯ ಜನರ ಜೀವ ಉಳಿಸುವಲ್ಲಿ ಕೇಂದ್ರ ವಿಫಲವಾಯಿತು ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.  ಹಾಗಿದ್ದರೂ ಈಗ ಪಾಕಿಸ್ತಾನದ ವಿರುದ್ಧ ಕೇಂದ್ರ ಕೈಗೊಳ್ಳುವ ನಿರ್ಧಾರಗಳಿಗೆ ನಮ್ಮ ಬೆಂಬಲವಿರುವುದಾಗಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆಗೆ ಭೇಟಿ ನೀಡುವ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ದ್ರೌ‍ಪದಿ ಮುರ್ಮು, ಪಾದಯಾತ್ರೆ ಮೂಲಕ ಭೇಟಿ

ನಾನು ದೇಶಭಕ್ತ ಅದಕ್ಕೇ ಸೂಸೈಡ್ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗ್ತೀನಿ ಎಂದೆ: ಜಮೀರ್ ಅಹ್ಮದ್

ಮಗಳ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ: ವಧು ಸೇರಿದಂತೆ ಐವರು ಸಾವು

ಪ್ರಧಾನಿ ಮೋದಿ ಜಮ್ಮು ಕಾಶ್ಮೀರ ಭೇಟಿ ರದ್ದಿಗೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ಗುಜರಾತ್‌: ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ 14ಸಾವು, ಭಾರೀ ಹಾನಿ

ಮುಂದಿನ ಸುದ್ದಿ
Show comments