Select Your Language

Notifications

webdunia
webdunia
webdunia
webdunia

ಮಾಲೆಗಾಂವ್ ಸ್ಫೋಟ ಪ್ರಕರಣ: ಸೋನಿಯಾ, ರಾಹುಲ್ ಸೇರಿದಂತೆ ಕೈ ನಾಯಕರು ಕ್ಷಮೆಯಾಚಿಸಬೇಕು

ಮಾಲೆಗಾಂವ್ ಸ್ಫೋಟ ಪ್ರಕರಣ

Sampriya

ನವದೆಹಲಿ , ಗುರುವಾರ, 31 ಜುಲೈ 2025 (16:33 IST)
Photo Credit X
ನವದೆಹಲಿ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ ನಂತರ, ಬಿಜೆಪಿ ಗುರುವಾರ "ಇದು ಅತ್ಯಂತ ಐತಿಹಾಸಿಕ ದಿನ" ಎಂದು ಹೇಳಿದೆ. 

ದೇಶದ ಮೇಲೆ "ಹಿಂದೂ ಭಯೋತ್ಪಾದನೆ" ಎಂದೂ ನಿರೂಪಣೆ ಮಾಡಲು ಪಿತೂರಿ ಮಾಡಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಈ ವಿಚಾರಚಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬಿಜೆಪಿಯ ಹಿರಿಯ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್ ಅವರು ತೀರ್ಪನ್ನು ಶ್ಲಾಘಿಸಿದ್ದಾರೆ, ಇದು "ದೇಶದಾದ್ಯಂತ 'ಕೇಸರಿ ಭಯೋತ್ಪಾದನೆ'ಯ ಎಂದು ನಿರುಪಣೆ ಮಾಡಲು ಪಿತೂರಿಯನ್ನು ನಾಶಪಡಿಸಿದೆ ಎಂದು ಹೇಳಿದರು. 

ಆ ಸಮಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣಕ್ಕಾಗಿ ಇದನ್ನು ಹೆಣೆದಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದ ಪ್ರಬಲ ಬಾಂಬ್ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡ ಸುಮಾರು 17 ವರ್ಷಗಳ ನಂತರ ಬಿಜೆಪಿಯ ಮಾಜಿ ಸಂಸದ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಮುಂಬೈನ ವಿಶೇಷ ನ್ಯಾಯಾಲಯವು ಗುರುವಾರ ದೋಷಮುಕ್ತಗೊಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಂಪ್ ಭಾರತವನ್ನು ತೆಗಳಿದರೆ ರಾಹುಲ್ ಗೆ ಖುಷಿಯಂತೆ: ಈತ ದೇಶದಲ್ಲಿರುವುದು ದೌರ್ಭಾಗ್ಯ ಎಂದ ತೇಜಸ್ವಿ ಸೂರ್ಯ