Webdunia - Bharat's app for daily news and videos

Install App

ಮದ್ಯದ ಬ್ರಾಂಡ್‌ಗಳಿಗೆ ಮಹಿಳೆಯರ ಹೆಸರಿಟ್ರೆ ಮಾರಾಟದಲ್ಲಿ ಹೆಚ್ಚಳ : ಬಿಜೆಪಿ ಸಚಿವ

Webdunia
ಸೋಮವಾರ, 6 ನವೆಂಬರ್ 2017 (14:56 IST)
ಮದ್ಯದ ಬ್ರಾಂಡ್‌ಗಳಿಗೆ ಮಹಿಳೆಯರ ಹೆಸರಿಡಿ, ಆವಾಗ ನೋಡಿ ಹೇಗೆ ಮಾರಾಟವಾಗುತ್ತೆ ಎಂದು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಮಹಾರಾಷ್ಟ್ರದ ನಂದೂರ್‌ಬರ್ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ  ಮಾತನಾಡಿ, ಮದ್ಯದ ಬಾಟಲಿಗಳಿಗೆ ಮಹಿಳೆಯರ ಹೆಸರಿಟ್ಟಲ್ಲಿ ವೇಗವಾಗಿ ಮಾರಟವಾಗುತ್ತವೆ ಎನ್ನುವ ಸೆಕ್ಸಿ ಹೇಳಿಕೆ ನೀಡಿದ್ದರು.
 
ಒಂದು ಬ್ರ್ಯಾಂಡ್‌ಗೆ ಭಿಂಗಾರಿ, ಮತ್ತೊಂದು ಬ್ರ್ಯಾಂಡ್‌ಗೆ ಬಾಬ್ಬಿ, ತದನಂತರ ಮತ್ತೊಂದು ಬ್ರ್ಯಾಂಡ್‌ಗೆ ಜ್ಯೂಲಿ ಎಂದು ಹೆಸರಿಡಿ ಮದ್ಯ ನೋಡು ನೋಡುತ್ತಲೇ ಮಾರಾಟವಾಗುತ್ತದೆ. ನಾನು ನಿಮಗೆ ನಿಮ್ಮ ಮದ್ಯದ ಬ್ರಾಂಡ್ ಯಾವುದು ಎಂದು ಕೇಳಿದೆ. ಅದಕ್ಕೆ ನೀವು ಮಹಾರಾಜ ಎಂದು ಹೇಳಿದಿರಿ. ಹಾಗಾದ್ರೆ ಹೇಗೆ ಮಾರಟವಾಗುತ್ತದೆ? ಮಹಾರಾಜಾ ಬದಲಿಗೆ ಮಹಾರಾಣಿ ಎಂದು ಹೆಸರಿಸಿ. ಆವಾಗ ನೋಡಿ ಮದ್ಯ ಹೇಗೆ ಮಾರಾಟವಾಗುತ್ತದೆ ಎಂದು ಸಚಿವರು ತಮ್ಮ ಜಾಣತನವನ್ನು ಪ್ರದರ್ಶಿಸಿದ್ದಾರೆ. 
 
ಈ ದಿನಗಳಲ್ಲಿ ಮದ್ಯದ ಬ್ರ್ಯಾಂಡ್‌ಗಳಿಗೆ ಮಹಿಳೆಯರ ಹೆಸರಿಡುವ ಪ್ರವೃತ್ತಿಯುಲ್ಲಿ ಹೆಚ್ಚಳವಾಗುತ್ತಿದೆ.ತಂಬಾಕು ಬ್ರ್ಯಾಂಡ್‌‍ಗಳು ಕೂಡಾ ಕಮಲ್, ವಿಮಲ್, ಸುಮನ್ ಎಂದು ಹೆಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ ನಾನು ಜೋಕ್ ಮಾಡಿದ್ದೆ, ನನಗೆ ಮಹಿಳೆಯರ ಬಗ್ಗೆ ತುಂಬಾ ಗೌರವವಿದೆ ಎಂದು ಸಚಿವ ಗಿರೀಶ್ ಮಹಾಜನ್ ಉಲ್ಟಾ ಹೊಡೆದಿದ್ದಾರೆ.
 
ಸಚಿವರು ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಚಿವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವರಮಹಾಲಕ್ಷ್ಮಿ ಹಬ್ಬಕ್ಕೆ ರೈತರಿಗೆ ಸರ್ಕಾರ ಬಂಪರ್‌ ಕೊಡುಗೆ: ಕೃಷಿ ಸಚಿವರಿಂದ ಮಹತ್ವದ ಘೋಷಣೆ

ಧರ್ಮಾಧಿಕಾರಿ ಏನು ದಾವುದ್ ಇಬ್ರಾಹಿಂ ನಾ, ಇದೆಲ್ಲ ವ್ಯವಸ್ಥಿತ ಸಂಚು: ಪ್ರತಾಪ್ ಸಿಂಹ ಆಕ್ರೋಶ

ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ದರು: ಆರಗ ಜ್ಞಾನೇಂದ್ರ

ರಾಹುಲ್ ಗಾಂಧಿ ಅವರ ದಿಟ್ಟ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಸಿಎಂ ಡಿ.ಕೆ. ಶಿವಕುಮಾರ್

ಮತಗಳ್ಳತನ, ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕತೆಯಿಲ್ಲ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments