ನಗ್ನರಾಗಿ ನಾಗಸಾಧುಗಳು ಒಟ್ಟಿಗೇ ಕುಂಭಮೇಳದಲ್ಲಿ ಸ್ನಾನಕ್ಕೆ ಧುಮುತ್ತಿರುವ ವಿಡಿಯೋ

Krishnaveni K
ಸೋಮವಾರ, 3 ಫೆಬ್ರವರಿ 2025 (14:16 IST)
ಪ್ರಯಾಗ್ ರಾಜ್: ವಸಂತ ಪಂಚಮಿ ನಿಮಿತ್ತ ಇಂದು ಕುಂಭಮೇಳದಲ್ಲಿ ಕೊನೆಯ ಶಾಹಿ ಸ್ನಾನ ನಡೆಯುತ್ತಿದೆ. ನಾಗಸಾಧುಗಳು ಒಟ್ಟಿಗೇ ನಗ್ನರಾಗಿ ಪವಿತ್ರಸ್ನಾನಕ್ಕೆ ಧಮುಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಾಕುಂಭಮೇಳದಲ್ಲಿ ನಾಗಸಾಧುಗಳ ಬಗ್ಗೆ ಕುತೂಹಲದಿಂದಲೇ ಹಲವು ತೆರಳುತ್ತಿದ್ದಾರೆ. ಅವರ ಜೀವನ ಶೈಲಿ ಬಗ್ಗೆಯೇ ಎಲ್ಲರಿಗೂ ಕುತೂಹಲವಿರುತ್ತದೆ. ಹೀಗಾಗಿ ಕುಂಭಮೇಳದಲ್ಲಿ ನಾಗಸಾಧುಗಳು ಪ್ರಮುಖ ಆಕರ್ಷಣೆಯಾಗಿದ್ದಾರೆ.

ಸಹಸ್ರ ಸಂಖ್ಯೆಯಲ್ಲಿ ನಾಗಸಾಧುಗಳು ಇಂದು ಪವಿತ್ರ ಗಂಗ ಸ್ನಾನ ಮಾಡಿದ್ದಾರೆ. ವಸಂತ ಪಂಚಮಿ ನಿಮಿತ್ತ ನಾಗಸಾಧುಗಳು ಮೊದಲು ಸ್ನಾನ ಮಾಡಿದ್ದು ಬಳಿಕ ಸಾರ್ವಜನಿಕರಿಗೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಿಗೇ ಹರ ಹರ ಮಹದೇವ ಎನ್ನುತ್ತಾ ಗಂಗಾ ನದಿಗೆ ಧುಮುಕಿ ಪುಣ್ಯಸ್ನಾನ ಮಾಡುವ ಅಪರೂಪದ ದೃಶ್ಯ ನೋಡಲು ಸಾಕಷ್ಟು ಜನ ನಿಂತಿದ್ದರು.

ಇನ್ನು, ಇಂದು ಪವಿತ್ರ ಸ್ನಾನ ಮಾಡುವವರ ಮೇಲೆ ಆಕಾಶದಿಂದ ಹೆಲಿಕಾಪ್ಟರ್ ಮೂಲಕ ಪುಷ್ಪ ಮಳೆ ಸುರಿಸಲಾಯಿತು. ವಸಂತ ಪಂಚಮಿ ನಿಮಿತ್ತ ಇಂದು ಕುಂಭಮೇಳದಲ್ಲಿ ವಿಪರೀತ ಜನ ದಟ್ಟಣೆ ಕಂಡುಬಂದಿದೆ. ಮೊನ್ನೆ ನಡೆದ ಕಾಲ್ತುಳಿತ ದುರಂತ ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇಂದ್ರದಿಂದಾಗುವ ಪರಿಹಾರಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ರೆ ಹೇಗೆ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿ ಟೀ ಶರ್ಟ್‌ ಒಳಗಡೆ ಕೈ ಹಾಕಿ ವ್ಯಕ್ತಿಯಿಂದ ವಿಕೃತಿ, video

ಮನೆ ಬಿಟ್ಟು ಹೋದ ಪತ್ನಿ, ಮಗಳನ್ನು ಕೊಂದು, ವ್ಯಕ್ತಿ ಮಾಡಿದ್ದೇನು ಗೊತ್ತಾ

ರೈತನ ಕೊಂದು ತೊಡೆ, ತಲೆ ಭಾಗ ತಿಂದು ಹಾಕಿದ ಹುಲಿ, ಮೈಸೂರಿನಲ್ಲಿ ವ್ಯಾಘ್ರ ದಾಳಿಗೆ ಮೂರು ಬಲಿ

ದಿಢೀರನೇ ತುಮಕೂರು ಪ್ರವಾಸವನ್ನು ರದ್ದು ಮಾಡಿದ ಸಿಎಂ, ಇದೇ ಕಾರಣ

ಮುಂದಿನ ಸುದ್ದಿ
Show comments