Webdunia - Bharat's app for daily news and videos

Install App

ಪ್ರಿಯಕರನನ್ನು ಉಳಿಸಲು ಮೂರಂತಸ್ತಿನಿಂದ ತಂದೆಯನ್ನೇ ಕೆಳಗೆ ತಳ್ಳಿದ ಪುತ್ರಿ

Webdunia
ಮಂಗಳವಾರ, 9 ಜನವರಿ 2018 (13:55 IST)
ಪ್ರಿಯಕರನನ್ನು ಉಳಿಸಲು ಪುತ್ರಿ ಹೆತ್ತ ತಂದೆಯನ್ನೇ ಮೂರನೇ ಅಂತಸ್ತಿನಿಂದ ಕೆಳಗೆ ತಳ್ಳಿ ಹತ್ಯೆಗೈದ ಹೇಯ ಘಟನೆ ವರದಿಯಾಗಿದೆ.
ಪುತ್ರಿ ಕೃತ್ಯದಿಂದ ಆಘಾತಗೊಂಡ ಆಕೆಯ ತಾಯಿ, ಪುತ್ರಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  
 
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಯುವತಿಯ ತಂದೆ ವಿಶ್ವನಾಥ್ ಸಾಹು ಬೆಳಿಗಿನ ಜಾವ 4 ಗಂಟೆಗೆ ಯಾವುದೋ ಶಬ್ದ ಕೇಳಿ ಬಂದಿದ್ದರಿಂದ ಎಚ್ಚರಗೊಂಡಿದ್ದಾರೆ. ಕೂಡಲೇ ಅವರು ತಮ್ಮ ಪುತ್ರಿಯ ಕೋಣೆಗೆ ಧಾವಿಸಿ ಬಾಗಿಲು ತೆರೆದಿದ್ದಾರೆ. 
 
ಪುತ್ರಿ ಪೂಜಾ ಮತ್ತು ಮತ್ತೊಬ್ಬ ಯುವಕ ನಗ್ನಾವಸ್ಥೆಯಲ್ಲಿರುವುದು ಕಂಡಾಗ ವಿಶ್ವನಾಥ್ ಕೋಪ ನೆತ್ತಿಗೇರಿದೆ. ಯುವಕ ಮತ್ತು ವಿಶ್ವನಾಥ್ ಮಧ್ಯೆ  ಜಗಳ ಆರಂಭವಾಗಿದೆ.
 
ಪುತ್ರಿ ಮತ್ತು ಆಕೆಯ ಪ್ರಿಯಕರ ಸೇರಿ ವಿಶ್ವನಾಥ್‌ರನ್ನು ಮೂರನೇ ಅಂತಸ್ತಿನಿಂದ ಕೆಳಗೆ ತಳ್ಳಿದ್ದಾರೆ. ಜೋರಾದ ಕೂಗಾಟ ಕೇಳಿ ವಿಶ್ವನಾಥ್ ಪತ್ನಿ ಮನೆಯಿಂದ ಹೊರಬಂದು ನೋಡಿದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. 
 
ವಿಶ್ವನಾಥ್‌ರನ್ನು ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
 
ವಿಶ್ವನಾಥ್ ಪತ್ನಿ, ತಮ್ಮ ಪುತ್ರಿ ಪೂಜಾ ಹಾಗೂ ಆಕೆಯ ಪ್ರಿಯಕರ ಧರ್ಮೆಂದ್ರ ವಿರುದ್ಧ ಹತ್ಯೆ ಆರೋಪದ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪ್ರಿಯಕರ ಧರ್ಮೆಂದ್ರ ಎಸ್ಕೇಪ್ ಆಗಿದ್ದಾನೆ. 
 
ಆರೋಪಿ ಧರ್ಮೆಂದ್ರನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಗ್ಯಾರಂಟಿ ಬೇಡ ಎನ್ನಿ ಎಂದ ಬಸವರಾಜ ರಾಯರೆಡ್ಡಿ: ಈ ಕಂಡೀಷನ್ ಮೊದ್ಲೇ ಹೇಳ್ಬೇಕಿತ್ತು ಎಂದ ಜನ

ಅಂತೂ ಮುಖ್ಯಮಂತ್ರಿ ಪಟ್ಟ ಬಿಡುವ ಕಾಲ ಬಂತು: ನೆಟ್ಟಿಗರಿಂದ ಸಿದ್ದರಾಮಯ್ಯ ಟ್ರೋಲ್

ಹಳೇ ಗರ್ಲ್ ಫ್ರೆಂಡ್ ಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಮರ್ಮಾಂಗಕ್ಕೆ ಥಳಿಸಿ ಹಲ್ಲೆ

Karnataka Weather: ಈ ವಾರ ರಾಜ್ಯದಲ್ಲಿ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಿರಲಿದೆ ನೋಡಿ

ಮುಂದಿನ ಸುದ್ದಿ
Show comments