Webdunia - Bharat's app for daily news and videos

Install App

ನಮ್ಮ ಆಹಾರದ ಆಯ್ಕೆಯನ್ನು ಪ್ರಶ್ನಿಸುವ ಯೋಗಿ ಆದಿತ್ಯನಾಥ್ ಯಾರು?: ಸಿಎಂ

Webdunia
ಮಂಗಳವಾರ, 9 ಜನವರಿ 2018 (13:37 IST)
ನಾವು ಏನನ್ನು ಸೇವಿಸಬೇಕು? ಏನನ್ನು ಸೇವಿಸಬಾರದು ಎಂದು ಹೇಳಲು ಸಿಎಂ ಯೋಗಿ ಆದಿತ್ಯನಾಥ್ ಯಾರು ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ನಾವು ಸೇವಿಸುವ ಆಹಾರದ ಆಯ್ಕೆಯನ್ನು ಪ್ರಶ್ನಿಸುವವರು ಇವರು ಯಾರು? ಅನೇಕ ಹಿಂದುಗಳು ಗೋಮಾಂಸ ಸೇವಿಸುತ್ತಾರೆ. ಒಂದು ವೇಳೆ ನಾನು ಗೋಮಾಂಸ ಸೇವಿಸಲು ಬಯಸಿದಲ್ಲಿ ಅದನ್ನು ತಡೆಯಲು ಇವರು ಯಾರು? ಎಂದು ಪ್ರಶ್ನಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಹಿಂದು ಎಂದು ಹೇಳುತ್ತಾರೆ.ಆದ್ರೆ ಗೋಮಾಂಸ ಸೇವನೆಗೆ ಪ್ರೋತ್ಸಾಹ ನೀಡುತ್ತಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿದ ಟ್ವೀಟ್‌ಗೆ ಸಿಎಂ ತಿರುಗೇಟು ನೀಡಿದ್ದಾರೆ. 
 
ನಾನು ಹಸುಗಳಿಗೆ ಮೇವು ನೀಡಿದ್ದೇನೆ, ಸೆಗಣಿ ಬಳಿದಿದ್ದೇನೆ, ಹಸುವಿನ ರಕ್ಷಣೆ ಮತ್ತು ಕಾಳಜಿಯ ಬಗ್ಗೆ ಟೀಕಿಸುತ್ತಿರುವ ಯೋಗಿ ಆದಿತ್ಯನಾಥ್ ಯಾ ಜಾನುವಾರುಗಳನ್ನು ಮೇಯಿಸುತ್ತಿದ್ದರು? ಅವರಿಗೆ ಹಸು ಸಂರಕ್ಷಣೆಯ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕು ಇದೆ?" ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments