Select Your Language

Notifications

webdunia
webdunia
webdunia
webdunia

‘ದೇವರೇ ರಾಹುಲ್ ಗಾಂಧಿಗೆ ಒಳ್ಳೆ ಬುದ್ಧಿ ಕೊಡಲಿ’

‘ದೇವರೇ ರಾಹುಲ್ ಗಾಂಧಿಗೆ ಒಳ್ಳೆ ಬುದ್ಧಿ ಕೊಡಲಿ’
ನವದೆಹಲಿ , ಬುಧವಾರ, 25 ಅಕ್ಟೋಬರ್ 2017 (08:19 IST)
ನವದೆಹಲಿ: ಗುಜರಾತ್ ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ತಿರುಗೇಟು ನೀಡಿದ್ದಾರೆ.

 
ದೇವರೇ ಅವರಿಗೆ ಒಳ್ಳೆ ಬುದ್ಧಿ ಕೊಡಲಿ ಎಂದಿದ್ದಾರೆ. ಜಿಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಬಣ್ಣಿಸಿದ ರಾಹುಲ್ ಗೆ ಧರ್ಮೇಂದ್ರ ಈ ರೀತಿ ತಿರುಗೇಟು ನೀಡಿದ್ದಾರೆ. 

ತಮ್ಮ ಪ್ರಧಾನಿಯನ್ನು ನಾನ್ ಸೆನ್ಸ್ ಎಂದು ಕರೆಯುವವರಿಗೆ ಮಾತ್ರ ಹೀಗೆಲ್ಲಾ ಹೇಳಲು ಸಾಧ್ಯ ಎಂದು ರಾಹುಲ್ ಗೆ ಧರ್ಮೇಂದ್ರ ಪ್ರಧಾನ್ ವ್ಯಂಗ್ಯವಾಡಿದ್ದಾರೆ. ಸಾರ್ವಜನಿಕ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಜಿಎಸ್ ಟಿ ತೆರಿಗೆ ಮತ್ತು ನೋಟು ನಿಷೇಧದ ಬಗ್ಗೆ ಪ್ರಧಾನಿ ಮೋದಿ ವಿರದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯ ಕನಸು ನುಚ್ಚುನೂರಾಗಿಸಿದ ಮಧ್ಯಪ್ರದೇಶ ಸಿಎಂ