Select Your Language

Notifications

webdunia
webdunia
webdunia
webdunia

ಒಂದೇ ಟೇರೆಸ್‌ನಲ್ಲಿ ಓಡಾಡುತ್ತಿರುವ ಚಿರತೆ, ಕರಡಿ: ಬೆಚ್ಚಿಬಿದ್ದ ಊಟಿಯ ಏಲೇನಹಳ್ಳಿ ಗ್ರಾಮಸ್ಥರು

ಒಂದೇ ಟೇರೆಸ್‌ನಲ್ಲಿ ಓಡಾಡುತ್ತಿರುವ ಚಿರತೆ, ಕರಡಿ: ಬೆಚ್ಚಿಬಿದ್ದ ಊಟಿಯ ಏಲೇನಹಳ್ಳಿ ಗ್ರಾಮಸ್ಥರು

Sampriya

ತಮಿಳುನಾಡು , ಶನಿವಾರ, 6 ಏಪ್ರಿಲ್ 2024 (15:55 IST)
Photo Courtesy X
ತಮಿಳುನಾಡು: ಊಟಿಯ ಏಲೇನಹಳ್ಳಿ ಪಟ್ಟಣದಲ್ಲಿ ಇಂದು ಮುಂಜಾನೆ ಕರಡಿ ಹಾಗೂ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರಾಣಿಗಳ ಚಲನ ವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಪ್ರಾಣಿಗಳಿಂದ ಜನರು ಭಯಭೀತರಾಗಿದ್ದಾರೆ.

ಈ ಬೆಳವಣಿಗೆಯ ನಂತರ ಗ್ರಾಮಸ್ಥರು ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ನೀಲಗಿರಿಯ ಬೆಟ್ಟದ ಜಿಲ್ಲೆ 65 ಪ್ರತಿಶತದಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಆನೆಗಳು, ಹುಲಿ, ಚಿರತೆ, ಕರಡಿ ಮತ್ತು ಕಾಡೆಮ್ಮೆಗಳು ಸೇರಿದಂತೆ ಅನೇಕ ಕಾಡು ಪ್ರಾಣಿಗಳಿಂದ ಕೂಡಿದೆ.

ಇನ್ನೂ ಗ್ರಾಮದಲ್ಲಿ ಕೋಳಿ ಹಾಗೂ ದನಗಳನ್ನು ಸಾಕುವುದರಿಮದ ಕಾಡು ಪ್ರಾಣಿಗಳು ಇದನ್ನು ತಿನ್ನಲು ವಸತಿ ಪ್ರದೇಶಗಲಿಗೆ ನುಗುತ್ತಿವೆ.   ಕಾಡುಪ್ರಾಣಿಗಳ ದೃಶ್ಯಗಳು ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದು, ಸಂಜೆ ವೇಳೆ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳ ಭಾವನೆ ಧಕ್ಕೆ ತಂದ ಕೇರಳ ಪಠ್ಯ ಪುಸ್ತಕದ ಚಿತ್ರ