Select Your Language

Notifications

webdunia
webdunia
webdunia
webdunia

ಆನೇಕಲ್`ನಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

ಆನೇಕಲ್`ನಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ
ಆನೇಕಲ್ , ಗುರುವಾರ, 1 ಜೂನ್ 2017 (10:49 IST)
ಆನೇಕಲ್`ನ ರಾಮಸಾಗರ ಗೇಟ್ ಬಳಿ ಕಳೆದ ರಾತ್ರಿ  ಬಿಜೆಪಿ ಮುಖಂಡನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಡ್ಯಾಗರ್`ನಿಂದ 20 ಬಾರಿ ಚುಚ್ಚಿ ಕೊಂದಿದ್ದಾರೆ. ಆನೇಕಲ್`ನ ಬ್ಲಾಕ್`ನ ಬಿಜೆಪಿ ಎಸ್ ಎಸ್ಟಿ ಮೋರ್ಚಾ ಉಪಾಧ್ಯಕ್ಷರಾಗಿದ್ದ ಹರೀಶ(40) ಹತ್ಯೆಗೀಡಾದ ಮುಖಂಡ.

ಕೆರೆಯ ಮೀನಿನ ಟೆಂಡರ ವಿಚಾರವಾಗಿ ಇತ್ತೀಚೆಗೆ ಹರೀಶ್ ಮತ್ತು ಸ್ಥಳೀಯ ಯುವಕರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳಲ್ಲಿ  ಆನೇಕಲ್`ನಲ್ಲಿ ಇಬ್ಬರು ಬಿಜೆಪಿ ಮುಖಂಡರ ಕೊಲೆಯಾಗಿದ್ದು, ಹರೀಶ್ ಮನೆಮುಂದೆ ಬಿಜೆಪಿ ಕಾರ್ಯಕರ್ತರ ದಂಡೇ ನೆರೆದಿದೆ. ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಹಿಜ್ಬುಲ್ ಮಿಜಾಯಿದ್ದೀನ್ ಉಗ್ರರ ಹತ್ಯೆ