Kumbhmela: ಕುಂಭಮೇಳಕ್ಕೆ ಹೋದರೆ ಮರೆಯದೇ ಮನೆಗೆ ತರಬೇಕಾದ ವಸ್ತುಗಳು

Krishnaveni K
ಸೋಮವಾರ, 20 ಜನವರಿ 2025 (11:16 IST)
Photo Credit: X
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋದರೆ ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ. ಅವುಗಳು ಯಾವುವು ನೋಡಿ.

ಮಹಾ ಕುಂಭಮೇಳ ಎನ್ನುವುದು ಹಿಂದೂಗಳ ಪವಿತ್ರ ಧಾರ್ಮಿಕ ಸಮಾವೇಶವಾಗಿದೆ. ತ್ರಿವೇಣಿ ಸಂಗಮದಲ್ಲಿ ಮಿಂದು ಜನ್ಮ ಜನ್ಮಾಂತರದ ಪಾಪ ಕಳೆಯುವುದರ ಜೊತೆಗೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಸಾಕಷ್ಟು ಜನ ಕರ್ನಾಟಕದಲ್ಲೂ ಪ್ರಯಾಗ್ ರಾಜ್ ಗೆ ತೆರಳಿ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.

ಕುಂಭಮೇಳಕ್ಕೆ ಹೋದವರು ತರಬೇಕಾದ ವಸ್ತುಗಳು
ಮಹಾಕುಂಭ ನಡೆಯುವುದು ಗಂಗಾ ನದಿಯ ತಟದಲ್ಲಿ. ಗಂಗಾ ನದಿಯ ನೀರು, ಮಣ್ಣು ಹಿಂದೂಗಳ ಪಾಲಿಗೆ ಅತ್ಯಂತ ಪೂಜನೀಯ ವಸ್ತುವಾಗಿದೆ. ಹೀಗಾಗಿ ತಪ್ಪದೇ ಇಲ್ಲಿಂದ ಬರುವಾಗ ಗಂಗಾ ನದಿಯ ನೀರು ಮತ್ತು ಮಣ್ಣು ತನ್ನಿ. ಈ ಮಣ್ಣನ್ನು ನಿಮ್ಮ ತುಳಸಿ ಕಟ್ಟೆಯಲ್ಲಿ ಹಾಕಿಡಿ.

ಮಹಾಕುಂಭಮೇಳದಲ್ಲಿ ಪವಿತ್ರ ರುದ್ರಾಕ್ಷಿ ಕಾಯಿಗಳನ್ನು ಮಾರುವವರು ಸಾಕಷ್ಟು ಜನ ಸಿಗುತ್ತಾರೆ. ಇಲ್ಲಿ ಸಿಗುವ ರುದ್ರಾಕ್ಷಿ ಅತ್ಯಂತ ಪವಿತ್ರದ್ದಾಗಿದ್ದು ಮನೆಗೆ ತಂದರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಹೀಗಾಗಿ ರುದ್ರಾಕ್ಷಿ ತಂದು ದೇವರ ಮನೆಯಲ್ಲಿಡಿ.

ಮಹಾಕುಂಭಮೇಳದಿಂದ ಹಿಂದೂಗಳು ಪೂಜನೀಯವಾಗಿ ಪರಿಗಣಿಸುವ ಶಂಖ, ಗಂಟೆ ಇತ್ಯಾದಿ ಯಾವುದೇ ವಸ್ತುಗಳನ್ನು ತಂದು ದೇವರ ಮನೆಯಲ್ಲಿಡಿ. ಎಲ್ಲಕ್ಕಿಂತ ವಿಶೇಷವಾಗಿ ತ್ರಿವೇಣಿ ಸಂಗಮದ ನೀರು ತಂದು ನಿಮ್ಮ ಮನೆಯಲ್ಲಿ ಪ್ರೋಕ್ಷಣೆ ಮಾಡಿ. ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನಾರೋಗ್ಯ ಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಪಡೆದ ಸಂಜಯ್ ರಾವುತ್‌ಗೆ ಮೋದಿ ವಿಶ್‌

ನವೆಂಬರ್ 1ರಂದು ಮೈಸೂರು ಝೂಗೆ ಹೋಗುವ 12ವರ್ಷದೊಳಗಿನ ಮಕ್ಕಳಿಗೆ ಗುಡ್‌ನ್ಯೂಸ್‌

ಹೈಕಮಾಂಡ್ ಹೇಳದೆ ಆಸೆ ಇಟ್ಟುಕೊಂಡರೆ ಆಸೆಯಾಗಿಯೇ ಉಳಿಯುತ್ತದೆ: ಶಾಸಕ ತನ್ವೀರ್‌ ಸೇಠ್

145ಕೆಜಿ ಎತ್ತಿ ಕಂಚು ಗೆದ್ದ 7 ತಿಂಗಳ ಗರ್ಭಿಣಿ, ಇದೆಷ್ಟೂ ಸೂಕ್ತ ಎಂದಾ ನೆಟ್ಟಿಗರು

ಮತ್ತೊಮ್ಮೆ ಆರ್‌ಎಸ್‌ಎಸ್ ನಿಷೇಧಿಸುವಂತೆ ಕರೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ಮುಂದಿನ ಸುದ್ದಿ
Show comments