Webdunia - Bharat's app for daily news and videos

Install App

ಮಗುವಿಗೆ ಮೊಲೆ ಹಾಲುಣಿಸಲು ತಾಯಿಗೆ ಅವಕಾಶ ನಿರಾಕರಿಸಿದ ಖ್ಯಾತ ಶಾಪಿಂಗ್ ಮಾಲ್! ಕೊನೆಗೆ ಏನಾಯ್ತು ಗೊತ್ತಾ?!

Webdunia
ಗುರುವಾರ, 29 ನವೆಂಬರ್ 2018 (10:28 IST)
ಕೋಲ್ಕೊತ್ತಾ: ಇಲ್ಲಿನ ಖ್ಯಾತ ಶಾಪಿಂಗ್ ಮಾಲ್ ಸೌತ್ ಸಿಟಿ ಮಾಲ್‍ ನಲ್ಲಿ ಅಲ್ಲಿನ ಸಿಬ್ಬಂದಿ ತಾಯಿಯೊಬ್ಬಳಿಗೆ ತನ್ನ ಮಗುವಿಗೆ ಮೊಲೆ ಹಾಲುಣಿಸಲು ಅವಕಾಶ ನಿರಾಕರಿಸಿದ ಘಟನೆ ನಡೆದಿದೆ.


ತನ್ನ ಪುಟ್ಟ ಮಗುವಿನೊಂದಿಗೆ ಶಾಪಿಂಗ್ ಬಂದಿದ್ದ ತಾಯಿಗೆ ಅನಿವಾರ್ಯವಾಗಿ ಮಗುವಿಗೆ ಹಾಲುಣಿಸಬೇಕಿತ್ತು. ಆದರೆ ಮಾಲ್ ಸಿಬ್ಬಂದಿಗೆ ಎಷ್ಟೇ ಮನವಿ ಮಾಡಿದರೂ ಅವರು ಸೂಕ್ತ ಸ್ಥಳ ನೀಡಲಿಲ್ಲ. ಅಷ್ಟೇ ಅಲ್ಲ, ಮಾಲ್ ಒಳಗೆ ಮೊಲೆ ಹಾಲುಣಿಸುವಂತಿಲ್ಲ ಎಂದು ಪಟ್ಟು ಹಿಡಿದರು.

ಕೊನೆಗೆ ಆ ತಾಯಿ ಮಾಲ್ ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ತಾನು ಎದುರಿಸಿದ ಪ್ರಸಂಗವನ್ನು ಫೀಡ್ ಬ್ಯಾಕ್ ಬರೆದಿದ್ದಳು. ಆದರೆ ಇದಕ್ಕೆ ಆ ಫೇಸ್ ಬುಕ್ ಪೇಜ್‍ ನಲ್ಲಿ ಬಂದ ಉತ್ತರ ಸಾಕಷ್ಟು ವಿವಾದಕ್ಕೆ ಕಾರಣವಾಯಿತು.

‘ಮನೆಯಲ್ಲಿ ಮಾಡಬೇಕಾದ ಕೆಲಸಗಳನ್ನು ಮನೆಯಲ್ಲೇ ಮಾಡಬೇಕು. ಮಾಲ್ ನಲ್ಲಿ ಇಂತಹದ್ದಕ್ಕೆಲ್ಲಾ ಅವಕಾಶವಿಲ್ಲ’ ಎಂದು ಫೇಸ್ ಬುಕ್ ನಲ್ಲಿ ಉದ್ಧಟತನದ ಪ್ರತಿಕ್ರಿಯೆ ಬಂತು. ಆದರೆ ಈ ಪ್ರತಿಕ್ರಿಯೆ ನೋಡಿ ಸಾರ್ವಜನಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಕೂಡಲೇ ಮಾಲ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಸಾರ್ವಜನಿಕರ ಆಕ್ರೋಶದಿಂದ ಬೆಚ್ಚಿದ ಮಾಲ್ ತಕ್ಷಣ ಆ ಪ್ರತಿಕ್ರಿಯೆಯನ್ನು ಅಳಿಸಿದ್ದಲ್ಲದೆ, ಈ ಫೇಸ್ ಬುಕ್ ಪೇಜ್ ನ್ನು ನಾವು ಒಂದು ಏಜೆನ್ಸಿ ಮೂಲಕ ನಡೆಸುತ್ತಿದ್ದೆವು. ಇದೀಗ ನಮ್ಮ ಫೇಸ್ ಬುಕ್ ಪೇಜ್ ನ ಜವಾಬ್ಧಾರಿಯಿಂದ ಆ ಏಜೆನ್ಸಿಯನ್ನು ಮುಕ್ತಗೊಳಸಿದ್ದೇವೆ ಎಂದು ಸ್ಪಷ್ಟನೆ ನೀಡಿತು. ಅಷ್ಟೇ ಅಲ್ಲದೆ, ತನ್ನ ಮಾಲ್ ನಲ್ಲಿ ಡಯಾಪರ್ ಚೇಂಜಿಂಗ್ ರೂಂ ಎಂದು ಮಕ್ಕಳು ಮತ್ತು ಅಮ್ಮಂದಿರ ಸಹಾಯಕ್ಕೆ ಪ್ರತ್ಯೇಕ ಕೊಠಡಿಯನ್ನು ತೆರೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments