Select Your Language

Notifications

webdunia
webdunia
webdunia
webdunia

ಆಸ್ತಿ ಮೋಹಕ್ಕೆ ಒಡಹುಟ್ಟಿದ ಅಣ್ಣನನ್ನು ಕೊಂದ !

ಆಸ್ತಿ ಮೋಹಕ್ಕೆ ಒಡಹುಟ್ಟಿದ ಅಣ್ಣನನ್ನು ಕೊಂದ !
ತಿರುವನಂತಪುರಂ , ಬುಧವಾರ, 9 ಮಾರ್ಚ್ 2022 (09:46 IST)
ತಿರುವನಂತಪುರಂ : ಆಸ್ತಿ ವಿಚಾರವಾಗಿ ಅಣ್ಣ ತಮ್ಮ ಇಬ್ಬರು ಜಗಳವಾಡಿಕೊಂಡಿದ್ದಾರೆ. ಕೊನೆಗೆ ಆಸ್ತಿ ಆಸೆಗೆ ಬಿದ್ದ ತಮ್ಮ ಸಹೋದರನನ್ನೇ ಕೊಂದು ಹಾಕಿರುವ ಘಟನೆ ನಡೆದಿದೆ.

ರಂಜು ಕುರಿಯನ್(55) ಮೃತ. ಜಾರ್ಜ್ ಕುರಿಯನ್ ಬಂಧಿತ ಆರೋಪಿಯಾಗಿದ್ದಾನೆ. ಈತ ಆಸ್ತಿಗಾಗಿ ಒಡಹುಟ್ಟಿದ ಅಣ್ಣನನ್ನು ಗುಂಡಿಕ್ಕಿ ಕೊಂದು ಹಾಕಿದ್ದಾನೆ. ಈ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.

ಜಾರ್ಜ್, ರಂಜು ಇಬ್ಬರು ಸಹೋದರರಾಗಿದ್ದಾರೆ. ಇಬ್ಬರು ಆಸ್ತಿ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಜಾರ್ಜ್ ಕೋಪಗೊಂಡು ರಂದು ಮೇಲೆ ಗುಂಡು ಹಾರಿಸಿದ್ದಾನೆ.

ಈ ವೇಳೆ ಗುಂಡು ಹಾರಿಸುವುದನ್ನು ತಡೆಯಲು ಮುಂದಾಗಿದ್ದ ಸೋದರ ಮಾವ ಮ್ಯಾಥ್ಯೂ ಸ್ಕೇರಿಯಾ ಅವರಿಗೆ ಬುಲೆಟ್ ತಗುಲಿದೆ. ಇವರು ಕೊಟ್ಟಾಯಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಾರ್ಜ್ನನ್ನು ಬಂಧಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ತೈಲ, ಅನಿಲ ಆಮದಿಗೆ ನಿರ್ಬಂಧ ಹೇರಿದ ಅಮೆರಿಕ!