Webdunia - Bharat's app for daily news and videos

Install App

ಸ್ಪೋಟದ ಸ್ಥಳದಲ್ಲಿ ಸಿಕ್ಕ ಪೆನ್ ಡ್ರೈವ್‌ನಲ್ಲಿ ಪ್ರಧಾನಿ ಪೋಟೋ: ಉಗ್ರ ಗುರಿ ಮೋದಿ?

Webdunia
ಗುರುವಾರ, 3 ನವೆಂಬರ್ 2016 (16:30 IST)
ಕೇರಳದ ಮಲ್ಲಪುರಂನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಳೆದೆರಡು ದಿನಗಳ ಹಿಂದೆ ಸಂಭವಿಸಿದ ಬಾಂಬ್ ಸ್ಟೋಟದ ತನಿಖೆ ಪ್ರಗತಿಯಲ್ಲಿದ್ದು ಘಟನಾ ಸ್ಥಳದಲ್ಲಿ ಸಿಕ್ಕ  ಪೆನ್ ಡ್ರೈವ್ ಮತ್ತು ಒಂದು ಪತ್ರ ಬೆಚ್ಚಿ ಬೀಳಿಸುವ ಸಂಗತಿಗಳನ್ನು ಹೊರಹಾಕಿದೆ. 
ಸ್ಥಳದಲ್ಲಿ ಸಿಕ್ಕ ಪೆನ್ ಡ್ರೈವ್‌ನಲ್ಲಿ ಪ್ರಧಾನಿ ಮೋದಿ, ಕೆಂಪುಕೋಟೆ, ಸಂಸತ್, ಮುಂಬೈ ಸ್ಪೋಟದ ಅಪರಾಧಿ ಯಾಕುಬ್ ಮೆಮನ್, ದಾದ್ರಿ ಬಲಿಪಶು ಅಖ್ಲಾಕ್  ಭಾವಚಿತ್ರಗಳು ಮತ್ತು ಬಾಬ್ರಿ ಮಸೀದಿ ನಾಶ, ಗುಜರಾತ್ ಗಲಭೆ ವಿಡಿಯೋಗಳಿವೆ. ಮೋದಿ ಫೋಟೋ ದೊರೆತಿರುವುದು ಉಗ್ರರ ಹಿಟ್ ಲಿಸ್ಟ್‌ನಲ್ಲಿ ಪ್ರಧಾನಿ ಇದ್ದಾರೆ ಎಂಬ ಸಂಕೇತಗಳನ್ನು ನೀಡಿದೆ. ಪೊಲೀಸರು ಘಟನಾ ಸ್ಥಳದಿಂದ ವಶಪಡಿಸಿಕೊಂಡ ಪತ್ರದಲ್ಲಿ ದಾದ್ರಿಯಲ್ಲಿ ಹತ್ಯೆಯಾದ ಮೊಹಮ್ಮದ್ ಅಖ್ಲಾಕ್ ಸಾವಿಗೆ ಸೇಡು ತೀರಿಸಿಕೊಳ್ಳುತ್ತೇವೆ, ಮತ್ತೊಂದು ಸ್ಪೋಟವನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. 
 
ಬಾಬ್ರಿ ಮಸೀದಿ ನಾಶದ ಬಳಿಕ ಅಸ್ತಿತ್ವಕ್ಕೆ ಬಂದಿರುವ ತಮಿಳುನಾಡು ಮೂಲದ ಉಗ್ರ ಸಂಘಟನೆ ಅಲ್- ಉಲ್ಮಾ ಈ ದಾಳಿ ಹಿಂದೆ ಇರಬಹುದು ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತ ಪಡಿಸಿವೆ. 
 
1998ರಲ್ಲಿ ನಡೆದ ಕೊಯಿಮತ್ತೂರು ಬ್ಲಾಸ್ಟ್ ಬಳಿಕ ನಿಷೇಧಕ್ಕೆ ಒಳಪಟ್ಟಿರುವ ಈ ಸಂಘಟನೆಗೆ 'ಬೇಸ್  ಮೂವ್‌ಮೆಂಟ್' ಎಂಬ ಹೆಸರು ಕೂಡ ಇದೆ. 
 
ಮಹಾರಾಷ್ಟ್ರ ಮತ್ತು ತಮಿಳುನಾಡು ನ್ಯಾಯಾಲಯಗಳಲ್ಲಿ ಇಂತಹ ದಾಳಿ ನಡೆಸಲು 'ಬೇಸ್  ಮೂವ್‌ಮೆಂಟ್' ಬದ್ಧವಾಗಿದೆ ಎಂಬ ಸಂದೇಶ ಕೂಡ ಪೆನ್ ಡ್ರೈವ್‌ನಲ್ಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಚ್ಚುತ್ತಿರುವ ಹುಲಿಗಳ ಸಂತತಿ: ಮಲೆ ಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸರ್ಕಾರ ಚಿಂತನೆ, ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

ಮೋದಿ ಸರ್ಕಾರ ರೈತರ ಜೀವ ಹಿಂಡುತ್ತಿದೆ: ರಣದೀಪ್ ಸುರ್ಜೇವಾಲ

ವಿಶ್ವಮಟ್ಟದಲ್ಲಿ ದಾಖಲೆ ಪುಟ ಸೇರಿದ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ

ಭಟ್ಕಳ, ಬೀದಿ ನಾಯಿಗಳ ದಾಳಿಗೆ 70 ಗಂಟೆಗಳಲ್ಲಿ 15ಕ್ಕೂ ಅಧಿಕ ಮಂದಿಗೂ ಹೆಚ್ಚು ಗಾಯ

ಕಾರ್ಮಿಕರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments