Publish Date: Mon, 18 Jun 2018 (09:36 IST)
Updated Date: Mon, 18 Jun 2018 (09:39 IST)
ತ್ರಿಶ್ಶೂರ್: ಪ್ರಧಾನಿ ಮೋದಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಬಳಿಕ ದೇಶದ ಎಲ್ಲಾ ಐಪಿಎಸ್ ಅಧಿಕಾರಿಗಳೂ ಈ ಚಾಲೆಂಜ್ ಸ್ವೀಕರಿಸುವಂತೆ ಆಹ್ವಾನ ನೀಡಿದ್ದರು.
ಪ್ರಧಾನಿ ಆಹ್ವಾನವನ್ನು ಅದೆಷ್ಟು ಜನ ಗಂಭೀರವಾಗಿ ಪರಗಣಿಸಿದ್ದಾರೋ ಗೊತ್ತಿಲ್ಲ. ಆದರೆ ಕೇರಳದ ತ್ರಿಶ್ಶೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಚಂದ್ರ ಪ್ರಧಾನಿ ಸವಾಲು ಸ್ವೀಕರಿಸಿದ್ದಾರೆ.
ನಿಮ್ಮ ಆಹ್ವಾನ ಸ್ವೀಕರಿಸುವುದು ಗೌರವ ತಂದುಕೊಟ್ಟಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಐಪಿಎಸ್ ಆಫೀಸರ್ ಯತೀಶ್ ತಾವು ವರ್ಕೌಟ್ ಮಾಡುವ ವಿಡಿಯೋವನ್ನೂ ಪ್ರಕಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.