Webdunia - Bharat's app for daily news and videos

Install App

ಅಂಗನವಾಡಿಯಲ್ಲೂ ಸಿಗಲಿದೆ ಚಿಕನ್ ಬಿರಿಯಾನಿ: ಬಾಲಕನ ಮನವಿಗೆ ಓಕೆ ಎಂದ ಸಚಿವರು

Krishnaveni K
ಮಂಗಳವಾರ, 4 ಫೆಬ್ರವರಿ 2025 (11:57 IST)
Photo Credit: X
ತಿರುವನಂತಪುರಂ: ಅಂಗನವಾಡಿಗಳಲ್ಲಿ ಪ್ರತಿನಿತ್ಯ ಮಕ್ಕಳಿಗೆ ರವೆ, ಗೋಧಿ ಉಪ್ಪಿಟ್ಟು ಇತ್ಯಾದಿ ಕೊಡಲಾಗುತ್ತದೆ. ಆದರೆ ಇನ್ನು ಮುಂದೆ ಅಂಗನವಾಡಿಯಲ್ಲೂ ಚಿಕನ್ ಬಿರಿಯಾನಿಯಂತಹ ರುಚಿಕರ ಆಹಾರವನ್ನು ಮಕ್ಕಳಿಗೆ ಕೊಡಲಾಗುತ್ತದಂತೆ. ಅಂಗನವಾಡಿ ಬಾಲಕನ ಮನವಿಗೆ ಸಚಿವರು ಓಕೆ ಎಂದಿದ್ದಾರೆ.

ಆದರೆ ಇದು ನಡೆದಿರುವುದು ಕೇರಳದಲ್ಲಿ. ಪುಟ್ಟ ಬಾಲಕನೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಅಂಗನವಾಡಿಗಳಲ್ಲಿ ಉಪ್ಪಿಟ್ಟು ಬದಲಿಗೆ ಚಿಕನ್, ಬಿರಿಯಾನಿ ನೀಡುವಂತೆ ಮನವಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಇದು ಕೇರಳದ ಶಿಕ್ಷಣ ಸಚಿವೆ ವೀಣಾ ಜಾರ್ಜ್ ಗಮನಕ್ಕೆ ಬಂದಿದೆ. ಈ ವಿಡಿಯೋಗೆ ಸ್ಪಂದಿಸಿರುವ ಸಚಿವರು ಇನ್ನು ಅಂಗನವಾಡಿಗಳಲ್ಲಿ ಚಿಕನ್, ಬಿರಿಯಾನಿಯೂ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಅಂಗನವಾಡಿಗಳಲ್ಲಿನ ಆಹಾರ ಮೆನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಶಂಕು ಎಂಬ ಪುಟ್ಟ ಬಾಲಕ ಅಂಗನವಾಡಿಗಳಲ್ಲಿ ರುಚಿಕರ ಆಹಾರ ನೀಡಿ ಎಂದು ಮನವಿ ಮಾಡುವ ವಿಡಿಯೋ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಇದನ್ನು ಸಾಕಷ್ಟು ಜನ ಶೇರ್, ಲೈಕ್ಸ್ ಮಾಡಿದ್ದರು. ಹೀಗಾಗಿ ಈಗ ಮೊಟ್ಟೆ, ಹಾಲು, ಉಪ್ಪಿಟ್ಟು ಅಲ್ಲದೆ ರುಚಿಕರ ತಿಂಡಿ ನೀಡಲು ಸಚಿವರು ಒಪ್ಪಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments