Select Your Language

Notifications

webdunia
webdunia
webdunia
webdunia

ಹಳಿ ತಪ್ಪಿದ ಎಕ್ಸಪ್ರೆಸ್ ರೈಲು; 40 ಜನರಿಗೆ ಗಾಯ

ಹಳಿ ತಪ್ಪಿದ ಎಕ್ಸಪ್ರೆಸ್ ರೈಲು; 40 ಜನರಿಗೆ ಗಾಯ
ಕಾನ್ಪುರ , ಬುಧವಾರ, 28 ಡಿಸೆಂಬರ್ 2016 (08:29 IST)
ಉತ್ತರ ಪ್ರದೇಶದ ಕಾನ್ಪುರದ ಬಳಿ  ಸಯಾಲ್ ದಹಾ- ಅಜ್ಮೇರ್ ಎಕ್ಸಪ್ರೆಸ್ ರೈಲು ಹಳಿ ತಪ್ಪಿದ್ದು ಓರ್ವ ಗಾರ್ಡ್ ಸೇರಿ 40ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ. ಇದುವರೆಗೂ ಯಾವುದೇ ಸಾವುನೋವಿನ ವರದಿಯಾಗಿಲ್ಲ.
ಇಂದು ಮುಂಜಾನೆ 5.20ರ ಸುಮಾರಿಗೆ ಕಾನ್ಪುರದ ರೂರಾ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದ್ದು, ಮುಂಜಾನೆ ಆವರಿಸಿದ್ದ ವ್ಯಾಪಕ ಮಂಜಿನಿಂದಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. 
 
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಭಾರತೀಯ ರೈಲು ಸಹಾಯವಾಣಿಯನ್ನು ಆರಂಭಿಸಿದೆ. 
 
ಘಟನೆಗೆ ತಕ್ಷಣ ಸ್ಪಂದಿಸಿರುವ ರೈಲು ಸಚಿವ ಸುರೇಶ್ ಪ್ರಭು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯ ಉನ್ನತ ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಂಡದಿಂದ ಕೈ ಬಿಟ್ಟಿರುವುದಕ್ಕೆ ಬಿಎಸ್‌ವೈ ಅವರನ್ನೇ ಕೇಳಿ: ಈಶ್ವರಪ್ಪ