Select Your Language

Notifications

webdunia
webdunia
webdunia
webdunia

ಲಾಲೂ ಪ್ರಸಾದ್ ಯಾದವ್ ಗೆ ಮರಳಿ ಜೈಲಿಗೆ ಹೋಗುವಂತೆ ಆದೇಶಿಸಿದ ಜಾರ್ಖಂಡ್ ಹೈಕೋರ್ಟ್

ಲಾಲೂ ಪ್ರಸಾದ್ ಯಾದವ್ ಗೆ ಮರಳಿ ಜೈಲಿಗೆ ಹೋಗುವಂತೆ ಆದೇಶಿಸಿದ ಜಾರ್ಖಂಡ್ ಹೈಕೋರ್ಟ್
ರಾಂಚಿ , ಶುಕ್ರವಾರ, 24 ಆಗಸ್ಟ್ 2018 (15:18 IST)
ರಾಂಚಿ : ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದ  ಬಿಹಾರ ಮಾಜಿ ಮುಖ್ಯಮಂತ್ರಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಆಗಸ್ಟ್ 30ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಜಾರ್ಖಂಡ್ ಹೈಕೋರ್ಟ್  ಆದೇಶಿಸಿದೆ.


ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ  3.5 ವರ್ಷಗಳ ಕಾಲ ಜೈಲುಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್​ ಸದ್ಯ ಚಿಕಿತ್ಸೆ ಪಡೆಯುವ  ಹಿನ್ನೆಲೆಯಲ್ಲಿ ಕೋರ್ಟ್​ನಿಂದ ಆಗಸ್ಟ್ 27ರವರೆಗೆ ಪ್ರಾವಿಜನಲ್​ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿದ್ರು. ಆದರೆ ಮತ್ತೆ ಇದನ್ನು 3 ತಿಂಗಳವರೆಗೆ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದರು.


ಇದನ್ನು ನಿರಾಕರಿಸಿದ ಕೋರ್ಟ್ ಆಗಸ್ಟ್ 30ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಸದ್ಯ ಮುಂಬೈಯ ಏಷಿಯಾನ್ ಹಾರ್ಟ್ ಇನ್ಸ್ ಟಿಟ್ಯೂಟ್ ಆಸ್ಪತ್ರೆಯಲ್ಲಿರುವ ಲಾಲೂ ಪ್ರಸಾದ್ ಯಾದವ್ , ಇನ್ನು ಮುಂದೆ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಳುಹುಪ್ಪಟೆಗಳ ಕಾಟದಿಂದ ಸಂತ್ರಸ್ಥರಲ್ಲಿ ಹೆಚ್ಚಿದ ಸಂಕಷ್ಟ