Webdunia - Bharat's app for daily news and videos

Install App

Indore Raja Raghuvamshi murder: ಗುಡ್ಡ ಹತ್ತಿ ಸುಸ್ತು ಎಂದಿದ್ದ ಹಂತಕರಿಗೆ ಸೋನಂ ನೀಡಿದ್ದ ಆಫರ್ ಏನು

Krishnaveni K
ಬುಧವಾರ, 11 ಜೂನ್ 2025 (10:58 IST)
ಇಂಧೋರ್: ಮೇಘಾಲಯದಲ್ಲಿ ಹನಿಮೂನ್ ಗೆ ಹೋಗಿದ್ದಾಗ ಗಂಡ ರಾಜ ರಘುವಂಶಿಯನ್ನು ಮರ್ಡರ್ ಮಾಡಿಸಿದ್ದ ಸೋನಂ ಹಂತಕರಿಗೆ ನೀಡಿದ್ದ ಆಫರ್ ಕೇಳಿದರೆ ಶಾಕ್ ಆಗ್ತೀರಿ.

ಜೂನ್ 2 ರಂದು ರಾಜ ರಘುವಂಶಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೇಘಾಲಯದ ಕಣಿವೆಯೊಂದರಲ್ಲಿ ಸಿಕ್ಕಿತ್ತು. ಇದಾದ ಬಳಿಕ ಪೊಲೀಸರು ಸುಳಿವುಗಳ ಬೆನ್ನತ್ತಿ ಆತನ ಪತ್ನಿ ಮತ್ತು ಪ್ರಿಯಕರ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ರಾಜ್ ಕುಶ್ವಾಹ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಸೋನಂ ಸುಪಾರಿ ಕೊಟ್ಟು ಗಂಡ ರಾಜ ರಘುವಂಶಿಯನ್ನು ಕೊಲೆ ಮಾಡಿಸಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಕೊಲೆ ಮಾಡಲು ಸೋನಂ ಮೊದಲು ಆರೋಪಿಗಳಿಗೆ 4 ಲಕ್ಷ ರೂ. ಆಫರ್ ನೀಡಿದ್ದಳು. ಅದರಂತೆ ಮೂವರು ಹಂತಕರು ಮೇಘಾಲಯಕ್ಕೆ ಬಂದಿದ್ದರು. ಸೋನಂ ಗುಡ್ಡ ನೋಡುವ ನೆಪ ಮಾಡಿ ಗಂಡನನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಳು.

ಅವರನ್ನು ಹಂತಕರೂ ಹಿಂಬಾಲಿಸಿದ್ದರು. ಅರ್ಧ ಗುಡ್ಡ ಹತ್ತಿದ ಬಳಿಕ ಸೋನಂ ಸುಸ್ತಾಗುವ ನೆಪದಿಂದ ಕೊಂಚ ಹಿಂದೆ ಉಳಿದುಕೊಂಡಳು. ಈ ವೇಳೆ ಹಂತಕರಿಗೂ ಗುಡ್ಡ ಹತ್ತಿ ಸುಸ್ತಾಗಿತ್ತು. ಹೀಗಾಗಿ ಅವರು ಇಂದು ಕೊಲೆ ಮಾಡುವುದು ಬೇಡವೆಂದು ಹಿಂದೆ ಹೋಗಲು ಯತ್ನಿಸಿದ್ದರು. ಆದರೆ ಸೋನಂ ಅವರಿಗೆ 20 ಲಕ್ಷ ರೂ. ನೀಡುವುದಾಗಿ ಭರ್ಜರಿ ಆಫರ್ ನೀಡಿದ್ದಳು. ಆಕೆಯ ಆಫರ್ ಕೇಳಿ ಸುಸ್ತು ಮರೆತು ಹಂತಕರು ತಮ್ಮ ಕೆಲಸ ಮಾಡಿದ್ದರು. ಗಂಡನನ್ನು ಕೊಲೆ ಮಾಡುವುದನ್ನು ಸೋನಂ ನೋಡುತ್ತಾ ನಿಂತಿದ್ದಳು. ಬಳಿಕ ಮೃತದೇಹವನ್ನು ಕಮರಿಗೆ ಎಸೆಯಲು ಸಹಾಯ ಮಾಡಿದ್ದಳು ಎಂದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಂಡಮಾರುತ ಎಫೆಕ್ಟ್‌, ದೇಶದ ಈ ಭಾಗದಲ್ಲಿ ಆ.7ರ ವರೆಗೆ ಭಾರೀ ಮಳೆ

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್‌ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಸೇನಾಧಿಕಾರಿ, ಕಾರಣ ಇಲ್ಲಿದೆ

ಭಾರೀ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ರಾಷ್ಟ್ರಪತಿಯನ್ನು ಭೇಟಿಯಾದ ಪ್ರಧಾನಿ ಮೋದಿ

ಉತ್ತರಪ್ರದೇಶ: ಪೃಥ್ವಿನಾಥ ದೇವಸ್ಥಾನಕ್ಕೆ ಹೊರಟು ಮಸಣ ಸೇರಿದ 11 ಮಂದಿ

ಮೀರತ್‌ ಭಯಾನಕ ಅಪರಾಧ: 7 ತಿಂಗಳ ಗರ್ಭಿಣಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ

ಮುಂದಿನ ಸುದ್ದಿ
Show comments