Raj Raghuvamshi murder: ಸೋನಂಳನ್ನು ಅಕ್ಕ ಎನ್ನುತ್ತಿದ್ದ ಮರ್ಡರ್ ಆದ ದಿನವೂ ಊರಲ್ಲೇ ಇದ್ದ

Krishnaveni K
ಬುಧವಾರ, 11 ಜೂನ್ 2025 (10:46 IST)
ಇಂಧೋರ್: ರಾಜ ರಘುವಂಶಿ ಕೊಲೆಯಲ್ಲಿ ನನ್ನ ಅಣ್ಣ ಅಮಾಯಕ. ಆತ ಆ ದಿನ ಊರಲ್ಲೇ ಇದ್ದ. ಸೋನಂ ಜೊತೆ ಅವನಿಗೆ ಬೇರೆ ಯಾವ ಸಂಬಂಧವೂ ಇರಲಿಲ್ಲ. ಅವಳನ್ನು ಅಕ್ಕ ಎನ್ನುತ್ತಿದ್ದ ಎಂದು ಆರೋಪಿ ರಾಜ್ ಕುಶ್ವಾಹ್ ಸಹೋದರಿ ಹೇಳಿಕೆ ನೀಡಿದ್ದಾಳೆ.

ನನ್ನ ಅಣ್ಣ, ಸೋನಂ ಕುಟುಂಬದವರ ಫ್ಯಾಕ್ಟರಿಯಲ್ಲೇ ಕೆಲಸ ಮಾಡುತ್ತಿದ್ದ. ಸೋನಂ ಹೆಚ್ಚಾಗಿ ಬೆಳಿಗ್ಗೆ ಅವನಿಗೆ ಕರೆ ಮಾಡುತ್ತಿದ್ದಳು. ಆದರೆ ಯಾವತ್ತೂ ಕೆಲಸದ ವಿಷಯಕ್ಕೇ ಕಾಲ್ ಮಾಡುತ್ತಿದ್ದುದು. ಕೆಲವೊಮ್ಮೆ ಅವರ ಫೋನ್ ನಮ್ಮ ಬಳಿ ಅಟೆಂಡ್ ಮಾಡಲು ಹೇಳುತ್ತಿದ್ದ. ಅಕ್ಕನಿಗೆ ಈಗ ಬರುತ್ತೇನೆ ಎಂದು ಹೇಳು ಎನ್ನುತ್ತಿದ್ದ.

ಇದರ ಹೊರತಾಗಿ ಅವನು ಆಕೆ ಜೊತೆ ಹೆಚ್ಚು ಮಾತನಾಡುತ್ತಿರಲಿಲ್ಲ. ಮರ್ಡರ್ ಆದ ದಿನ ಅಂದರೆ ಮೇ 23 ರಂದು ಅಣ್ಣ ಊರಲ್ಲೇ ಇದ್ದ. ಸೋನಂ ಮದುವೆಗೂ ನಾವು ಯಾರೂ ಹೋಗಿರಲಿಲ್ಲ. ನಾವೆಲ್ಲಾ ಅದೇ ದಿನ ನಮ್ಮ ಹಳ್ಳಿಗೆ ಹೋಗಿದ್ದೆವು. ನಮ್ಮ ಅಣ್ಣ ಇಂಧೋರ್ ನಲ್ಲಿಯೇ ಇದ್ದ. ಆದರೆ ಬೇರೆ ಕೆಲಸ ಇದ್ದಿದ್ದರಿಂದ ಮದುವೆಗೆ ಹೋಗಿರಲಿಲ್ಲ ಎಂದು ಸಹೋದರಿ ಹೇಳಿಕೆ ನೀಡಿದ್ದಾಳೆ. ಈ ಕೊಲೆಗೂ ನನ್ನ ಅಣ್ಣನಿಗೂ ಸಂಬಂಧವಿಲ್ಲ. ಅವನು ಈ ಕೊಲೆ ಮಾಡಿಲ್ಲ. ಅವನು ಅಮಾಯಕ ಎಂದು ಸಹೋದರಿ ಹೇಳಿಕೊಂಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ಫೋಸಿಸ್ ನವರು ಬೃಹಸ್ಪತಿಗಳಾ ಎಂದ ಸಿದ್ದರಾಮಯ್ಯ: ನಿಮಗಿಂತಲೂ ದೊಡ್ಡ ಕೊಡುಗೆ ನೀಡಿದ್ದಾರೆ ಎಂದ ನೆಟ್ಟಿಗರು

ಪಾಕಿಸ್ತಾನ ದಾಳಿಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟಿಗರ ಸಾವು: ರಶೀದ್ ಖಾನ್ ಆಕ್ರೋಶ

Karnataka Weather: ವಾರಂತ್ಯಕ್ಕೆ ಮಳೆಯ ಸಾಧ್ಯತೆಯಿದೆಯಾ ಇಲ್ಲಿದೆ ಹವಾಮಾನ ವರದಿ

ಅಸ್ಸಾಂನ ಗಾಯಕ ಜುಬಿನ್ ಗರ್ಗ್ ನಿಧನ: ನ್ಯಾಯಯುತ ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ನನಗೇನಾದರೆ ರಾಜ್ಯ ಸರ್ಕಾರ, ಪ್ರಿಯಾಂಕ್ ಖರ್ಗೆ ಹೊಣೆ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments