Webdunia - Bharat's app for daily news and videos

Install App

Indore Couple murder: ಮದುವೆ ಇಷ್ಟ ಇಲ್ಲ ಅಂದ್ರೆ ಆಗ್ಬೇಡಿ, ಮರ್ಡರ್ ಯಾಕೆ ಮಾಡ್ತೀರಿ

Krishnaveni K
ಸೋಮವಾರ, 9 ಜೂನ್ 2025 (11:08 IST)
Photo Credit: X
ಇಂಧೋರ್: ಮದುವೆ ಇಷ್ಟ ಅಲ್ಲ ಅಂದ್ರೆ ಆಗ್ಬೇಡಿ, ಮರ್ಡರ್ ಮಾಡಿ ಯಾರದ್ದೋ ಮಕ್ಕಳ ಜೀವ, ಜೀವನ ಯಾಕೆ ಕಸಿದುಕೊಳ್ತೀರಿ? ಇಂಧೋರ್ ನಲ್ಲಿ ಹನಿಮೂನ್ ಗೆ ಕರೆದೊಯ್ದು ಪತಿಯನ್ನು ಪತ್ನಿಯೇ ಮರ್ಡರ್ ಮಾಡಿದ ಪ್ರಕರಣದ ಬಗ್ಗೆ ಸಾರ್ವಜನಿಕರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇಂಧೋರ್ ನ ರಾಜ ರಘುವಂಶಿ ಜೊತೆ ಸೋನಮ್ ಗೆ ಮೇ 10 ರಂದು ಮದುವೆಯಾಗಿತ್ತು. ಮದುವೆಯಲ್ಲಿ ನಗು  ನಗುತ್ತಾ ಪತಿ ಜೊತೆ ಸೋನಮ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದರು. ಆಗ ಯಾರೂ ಈಕೆಗೆ ಗಂಡನ ಮೇಲೆ ಅಷ್ಟು ಧ್ವೇಷವಿತ್ತು ಎಂದು ಹೇಳುವಂತೆಯೇ ಇರಲಿಲ್ಲ.

ಆದರೆ ಮೇ 22 ಕ್ಕೆ ಹನಿಮೂನ್ ಗೆ ಹೋದ ಇಬ್ಬರೂ ಬೈಕ್ ರೈಡ್ ಗೆ ತೆರಳಿದ್ದರು. ಜೂನ್ 2 ರಂದು ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಪತ್ನಿ ನಾಪತ್ತೆಯಾಗಿದ್ದಳು. ಪತಿ ಜೊತೆ ಬೈಕ್ ರೈಡ್ ಗೆ ತೆರಳುವ ಮುನ್ನ ಸೋನಮ್ ಫೋನ್ ನಲ್ಲಿ ಮಾತನಾಡುತ್ತಿರುವ ದೃಶ್ಯಗಳೂ ವೈರಲ್ ಆಗಿತ್ತು. ಹೀಗಾಗಿ ಸೋನಮ್ ತಮ್ಮ ಲೊಕೇಷನ್ ಬಗ್ಗೆ ಗೂಂಡಾಗಳಿಗೆ ಮಾಹಿತಿ ನೀಡಿರಬಹುದು ಎನ್ನಲಾಗಿದೆ.

ಈ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಷ್ಟವಿಲ್ಲದ ಮೇಲೆ ಮದುವೆ ಯಾಕೆ ಆಗ್ತೀರಿ? ಒಂದು ವೇಳೆ ಮದುವೆಯಾದ ಮೇಲೆ ಇಷ್ಟವಾಗ್ತಿಲ್ಲ ಎಂದರೆ ಡಿವೋರ್ಸ್ ಪಡೆದುಕೊಳ್ಳಬಹುದು. ಅದು ಬಿಟ್ಟು ಕೊಲೆ ಮಾಡಿ ಇನ್ನೊಂದು ಜೀವ ತೆಗೆದು ನಿಮ್ಮ ಜೀವನವನ್ನೂ ಯಾಕೆ ಹಾಳು ಮಾಡ್ತೀರಿ? ಗಂಡನನ್ನೇ ಕೊಲ್ಲುವ ಹೆಂಡತಿ ಎಂದರೆ ನಾವು ಎಂಥಾ ಸಮಾಜದಲ್ಲಿ ಇದ್ದೇವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು

ತಮಿಳುನಾಡಿನ ಚೋಳರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: 140 ಕೋಟಿ ಭಾರತೀಯರ ಕಲ್ಯಾಣಕ್ಕೆ ಪ್ರಾರ್ಥನೆ

ಹರಿದ್ವಾರ ಕಾಲ್ತುಳಿತ, ಇದು ಅಪಘಾತವಲ್ಲ, ಆಡಳಿತ ವ್ಯವಸ್ಥೆಯ ವೈಫಲ್ಯ: ಕೇಜ್ರಿವಾಲ್

ರಾಜ್ಯದಲ್ಲಿ ರಸಗೊಬ್ಬರದ ಕಾಳದಂಧೆ: ಸರ್ಕಾರದ ವಿರುದ್ಧ ಜು.28ರಂದು ಪ್ರತಿಭಟನೆ, ವಿಜಯೇಂದ್ರ

ಎಚ್ಚರಿಕೆ ಬಳಿಕವು ನಿಷೇಧಿತ ಬಣ್ಣ ಬಳಕೆ: 6 ಎಂಫೈರ್ ಹೊಟೇಲ್ ವಿರುದ್ಧ ಕ್ರಮಕ್ಕೆ ಚಿಂತನೆ

ಮುಂದಿನ ಸುದ್ದಿ
Show comments