Webdunia - Bharat's app for daily news and videos

Install App

ಭಾರತದ ಮಹತ್ವಾಕಾಂಕ್ಷಿ ಸಮುದ್ರಯಾನ : ಸಮುದ್ರದ ರಹಸ್ಯಗಳ ಅನಾವರಣ

Webdunia
ಸೋಮವಾರ, 18 ಸೆಪ್ಟಂಬರ್ 2023 (14:32 IST)
ಭಾರತದ ಮಹತ್ವದ ಚಂದ್ರ ಅನ್ವೇಷಣಾ ಯೋಜನೆ ಚಂದ್ರಯಾನ-3ರ ಯಶಸ್ಸಿನ ಬಳಿಕ, ಭಾರತೀಯ ವಿಜ್ಞಾನಿಗಳು ಒಂದು ವಿನೂತನ ಪ್ರಯತ್ನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
 
ಈ ಮಹತ್ತರ ‘ಸಮುದ್ರಯಾನ ಯೋಜನೆ’ ದೇಶೀಯ ನಿರ್ಮಾಣದ ಸಬ್ಮರ್ಸಿಬಲ್ ಅನ್ನು ಸಮುದ್ರದ ಮೇಲ್ಮೈಯಿಂದ 6,000 ಮೀಟರ್ ಕೆಳಗಡೆ ಇಳಿಸುವ ಉದ್ದೇಶ ಹೊಂದಿದ್ದು, ಭಾರತದ ಮೊತ್ತ ಮೊದಲ ಆಳ ಸಮುದ್ರ ಅನ್ವೇಷಣೆಗೆ ಮೂವರು ಮಾನವರನ್ನೂ ಇಳಿಸುವ ಗುರಿ ಹೊಂದಿದೆ. ಆಳ ಸಮುದ್ರದ ಅನ್ವೇಷಣೆ ನಡೆಸುವುದು ಅತ್ಯಂತ ಸವಾಲಿನ ಕಾರ್ಯವಾಗಿದೆ.

 
200 ಮೀಟರ್ಗಿಂತ ಆಳದಲ್ಲಿ, ಸಮುದ್ರ ಅತ್ಯಂತ ಕತ್ತಲಾಗಿರುತ್ತದೆ, ತಣ್ಣಗಾಗಿರುತ್ತದೆ, ಮತ್ತು ಸಾಗರದಾಳದ ಒತ್ತಡ ಸಾಕಷ್ಟು ಹೆಚ್ಚಾಗುತ್ತದೆ. ಈ ಯೋಜನೆಯ ಗುರಿಗಳಲ್ಲಿ, ಸಮುದ್ರದಾಳದ ಸಂಪನ್ಮೂಲಗಳಾದ ಕೋಬಾಲ್ಟ್, ನಿಕ್ಕೆಲ್, ಹಾಗೂ ಮ್ಯಾಂಗನೀಸ್ಗಳನ್ನು ಅನ್ವೇಷಿಸುವುದು ಸೇರಿದೆ. ಅದರೊಡನೆ, ಈ ವಿಶಿಷ್ಟ ವಾತಾವರಣದಲ್ಲಿನ ಜೀವವೈವಿಧ್ಯವನ್ನು ಅನ್ವೇಷಿಸುವ ಗುರಿಯನ್ನೂ ಹೊಂದಿದೆ.

ಈ ಸಾಗರದಾಳದ ಅನ್ವೇಷಣಾ ಯೋಜನೆಗೆ ಕೇಂದ್ರ ಸರ್ಕಾರ 2020-2021ರಿಂದ 2025-2026ರ ತನಕ ಐದು ವರ್ಷಗಳ ಅವಧಿಗೆ ಅನುಮೋದನೆ ನೀಡಿದೆ. ಭೂ ವಿಜ್ಞಾನ ಸಚಿವಾಲಯ, 2021ರಿಂದ 2026ರ ತನಕ ನಡೆಯುವ ಎರಡು ಹಂತಗಳ ಈ ಯೋಜನೆಗೆ ಅಂದಾಜು 4,077 ಕೋಟಿ ವೆಚ್ಚ ತಗಲುವ ನಿರೀಕ್ಷೆಗಳಿವೆ ಎಂದಿದೆ. ಯೋಜನೆಗೆ ಈಗಾಗಲೇ 1,400 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಮೊತ್ತದಲ್ಲಿ, 405.92 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ 225.35 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments