Webdunia - Bharat's app for daily news and videos

Install App

ಅನೈತಿಕ ಸಂಬಂಧ: ಗೆಳೆಯನಿಗೆ ನೋ ಎಂದಿದ್ದಕ್ಕೆ ಜೀವ ಕಳೆದುಕೊಂಡ ಮಹಿಳೆ

Webdunia
ಗುರುವಾರ, 30 ನವೆಂಬರ್ 2023 (11:13 IST)
ಅನೈತಿಕ ಸಂಬಂಧ ಯಾವತ್ತೂ ಕೆಟ್ಟದ್ದು ಎಂದು ಗೊತ್ತಿದ್ದರೂ ಕೂಡಾ ಪದೇ ಪದೇ ಅದೇ ಸಹವಾಸ ಮಾಡುವವರಿಗೆ ಇಲ್ಲಿಯ ಘಟನೆ ಬೆಚ್ಚಿ ಬೀಳಿಸುವಂತಹದಾಗಿದೆ. ಆರೋಪಿಯೊಬ್ಬ ತನ್ನ ಅನೈತಿಕ ಸುಖಕ್ಕಾಗಿ ಗೆಳತಿಯನ್ನೇ  ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
 
ಗಂಡ ಇಲ್ಲದ ಹೆಂಡತಿಯನ್ನು, ಹೆಂಡತಿ ಇಲ್ಲದ ಗಂಡನೊಬ್ಬ ಸೆಕ್ಸ್‌ ಮಾಡಲು ಆಹ್ವಾನಿಸಿದ್ದಾನೆ. ಆದ್ರೆ ಪಲ್ಲಂಗವನ್ನು ಹಂಚಿಕೊಳ್ಳಲು ಒಪ್ಪದ ಆ ಮಹಿಳೆ ಅವನನ್ನು ತಡೆಯಲು ಯತ್ನಿಸಿದ್ದಾಳೆ. ಆದ್ರೆ ಮದವೇರಿದ ಆಘಂತುಕ ಆಕೆಯ ಹೊಟ್ಟೆಗೆ ಢಮಾರ್‌ ಎಂದು ಗುಂಡು ಹಾರಿಸುವುದರ ಮೂಲಕ ಮೂರು ಮಕ್ಕಳ ತಾಯಿಯನ್ನು ಹತ್ಯೆ ಮಾಡಿದ ಘಟನೆ ಭೂಪಾಲ್‌ ನಗರದಲ್ಲಿ ನಡೆದಿದೆ.
 
ಭೂಪಾಲ್‌ ನಗರದಲ್ಲಿ ವಾಸಿಸುವ ಗೋಪಾಲ್‌ ಎಂಬ ವ್ಯಕ್ತಿಗೆ ಈಗಾಗಲೇ ಮದುವೆಯಾಗಿ ಮಕ್ಕಳು ಕೂಡ ಇದ್ದರು. ಆದ್ರೆ ಕೆಲವು ವರ್ಷಗಳಿಂದ ಗೋಪಾಲನ ಹೆಂಡತಿ ಸಾವಿಗೀಡಾಗಿದ್ದಳು. ಇವನ ಮನೆಯ ಹತ್ತಿರದಲ್ಲೇ ಇನ್ನೊಂದು ಕುಟುಂಬ ಇತ್ತು. ತನ್ನ ಪತಿರಾಯನನ್ನು ಕಳೆದುಕೊಂಡ ವಿಧವೆ ಸುಜಾತ ( ಹೆಸರು ಬದಲಾಯಿಸಲಾಗಿದೆ) ತನ್ನ ಮೂವರು ಮಕ್ಕಳೊಂದಿಗೆ ಅಲ್ಲಿನ ಬಹುಮಹಡಿ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.
 
ಹೆಂಡತಿ ಇಲ್ಲದ ಗೋಪಾಲ್‌ಗೆ ಗಂಡ ಇಲ್ಲದ ಸಜಾತಾಳ ಮೇಲೆ ಮೋಹ ಉಂಟಾಗಿದೆ. ಆಕೆಯೂ ಕೂಡ ಅವನೊಂದಿಗೆ ಸಲುಗೆಯಿಂದ ವರ್ತಿಸಿದ್ದಾಳೆ. ಹೀಗಾಗಿ ಇಬ್ಬರು ಪ್ರೇಮ ಪಾಶದಲ್ಲಿ ಬಿದ್ದಿದ್ದಾರೆ. ಆದ್ರೆ ಕಾಮುಕ ಗೋಪಾಲ್‌ ಸುಜಾತಳನ್ನು ಸಂಭೋಗಿಸಲು ಆಗಾಗ ಅವಳ ಮನೆಯ ಬಳಿಗೆ ಬಂದು ಪೀಡಿಸುತ್ತಿದ್ದ. ಇದು ಆಕೆಗೆ ಹೆಚ್ಚಿನ ಇರುಸು ಮುರುಸು ಉಂಟಾಯಿತು.

ಗೋಪಾಲನ ಅತಿಯಾದ ಕಾಮಕ್ಕೆ ಆಕೆ ಬೇಸತ್ತು ಅವನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದಳು. ಆದರೆ, ಆಕೆಯ ನಿರ್ಧಾರದಿಂದ ಕೋಪಗೊಂಡ ಗೆಳೆಯ ರಿವಾಲ್ವರ್‌ನಿಂದ ಗುಂಡುಹಾರಿಸಿ ಕೊಂದೇ ಬಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Firing Case: ನ್ಯಾಯ ಸಿಗದಿದ್ದಲ್ಲಿ ಸುಮ್ಮನೇ ಕೂರವವರೇ ಅಲ್ಲ, ರಿಕ್ಕಿ ರೈ

ಗೌರವ ಡಾಕ್ಟರೇಟ್‌ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ, ಕಾರಣ ಬಿಚ್ಚಿಟ್ಟಿದ್ದು ಹೀಗೇ

ಕಪ್ ಗೆದ್ದು ಅಭಿಮಾನಿಗಳ ಕಾಯುವಿಕೆ ಅಂತ್ಯ ಮಾಡಿ, RCBಗೆ ಶುಭ ಹಾರೈಸಿದ ಸಿದ್ದರಾಮಯ್ಯ

ವಾಕ್ ಸ್ವಾತಂತ್ರ್ಯವಿದೆ, ನೋವಿಸುವಷ್ಟರ ಮಟ್ಟಿಗಲ್ಲ: ಶರ್ಮಿಷ್ಟಾ ಪನೋಲಿಗೆ ಜಾಮೀನು ನೀಡಲು ಕೋರ್ಟ್‌ ನಿರಾಕರಣೆ

ಹಿಂದೂಗಳಿಗೆ ಹೀಗೇ ತೊಂದರೆ ಕೊಡುತ್ತಿದ್ದರೆ ಬಿಜೆಪಿ ಕೈಕಟ್ಟಿ ಕೂರಲ್ಲ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ