India Pakistan: ಪಾಕಿಸ್ತಾನದ ಜೊತೆ ಯುದ್ಧ ನಡೆದರೆ ಭಾರತದ ಜೊತೆ ಯಾವೆಲ್ಲಾ ರಾಷ್ಟ್ರ ನಿಲ್ಲಬಹುದು ನೋಡಿ

Krishnaveni K
ಶನಿವಾರ, 26 ಏಪ್ರಿಲ್ 2025 (10:38 IST)
ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಈಗೇನಾದರೂ ಯುದ್ಧ ನಡೆದರೆ ಭಾರತದ ಜೊತೆ ಯಾವೆಲ್ಲಾ ರಾಷ್ಟ್ರ ನಿಲ್ಲಬಹುದು ನೋಡಿ.

ಉಗ್ರರು ದಾಳಿ ಮಾಡುತ್ತಿದ್ದಂತೇ ಆಕ್ರೋಶಗೊಂಡಿರುವ ಭಾರತ ಆ ದೇಶದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿದೆ. ಜೊತೆಗೆ ಗಡಿಯಲ್ಲಿ ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದೆ. ಸೇನೆ ಜಮಾವಣೆ ಮಾಡಿದೆ. ಭಾರತ ದಾಳಿ ಮಾಡಬಹುದು ಎಂಬ ಹೆದರಿಕೆಗೆ ಅತ್ತ ಪಾಕಿಸ್ತಾನ ಕೂಡಾ ತನ್ನ ಸೇನೆಯನ್ನು ಸನ್ನದ್ಧಗೊಳಿಸಿದೆ. ಇದರಿಂದಾಗಿ ಒಂದು ರೀತಿಯಲ್ಲಿ ಯುದ್ಧದ ಕಾರ್ಮೋಡವಿದೆ.

ಈಗೇನಾದರೂ ಯುದ್ಧ ನಡೆದರೆ ಭಾರತವೇ ಮೇಲುಗೈ ಸಾಧಿಸಲಿದೆ. ಯಾಕೆಂದರೆ ಭಾರತ ಕೆಲವು ಪ್ರಬಲ ರಾಷ್ಟ್ರಗಳೊಂದಿಗೆ ತನ್ನ ವಿದೇಶಾಂಗ ಸಂಬಂಧವನ್ನು ಅಷ್ಟರಮಟ್ಟಿಗೆ ಅಭಿವೃದ್ಧಿಪಡಿಸಿದೆ. ಅಮೆರಿಕಾ, ರಷ್ಯಾ, ಇಸ್ರೇಲ್ ನಂತಹ ಪ್ರಬಲ ರಾಷ್ಟ್ರದ ಸ್ನೇಹ ಸಂಪಾದಿಸಿದೆ.

ಒಂದು ವೇಳೆ ಈಗೇನಾದರೂ ಯುದ್ಧ ಸಂಭವಿಸಿದರೆ ಭಾರತಕ್ಕೆ ಈ ಮೂರೂ ಪ್ರಬಲ ರಾಷ್ಟ್ರಗಳು ಬೆಂಬಲ ನೀಡಲಿವೆ. ಈಗಾಗಲೇ ಅಮೆರಿಕಾ ಮತ್ತು ಇಸ್ರೇಲ್ ತನ್ನ ಯುದ್ಧ ವಿಮಾನಗಳನ್ನು ಭಾರತಕ್ಕೆ ತಂದು ನಿಲ್ಲಿಸಿರುವುದೇ ಇದಕ್ಕೆ ಸಾಕ್ಷಿ. ಅತ್ತ ರಷ್ಯಾ ಜೊತೆಗೂ ಭಾರತಕ್ಕೆ ಈಗ ಉತ್ತಮ ಬಾಂಧವ್ಯವಿದೆ. ಜೊತೆಗೆ ಗಲ್ಫ್ ರಾಷ್ಟ್ರಗಳೊಂದಿಗೂ ಭಾರತ ಈಗ ಉತ್ತಮ ಸಂಬಂಧ ಕಾಯ್ದುಕೊಂಡಿದೆ. ಇದು ಪಾಕಿಸ್ತಾನಕ್ಕೆ ಹೊಡೆತ ನೀಡಲಿದೆ.

ಇನ್ನು, ಪಾಕಿಸ್ತಾನಕ್ಕೆ ನೆರೆಯ ದೈತ್ಯ ರಾಷ್ಟ್ರ ಚೀನಾ ಬೆಂಬಲ ನೀಡಬಹುದು. ಇದರ ಹೊರತಾಗಿ ಬ್ರಿಟನ್ ತಟಸ್ಥವಾಗಿರುವ ಸಾಧ್ಯತೆಯೇ ಹೆಚ್ಚು. ಕೇವಲ ಶಸ್ತ್ರಾಸ್ತ್ರ ವಿಚಾರದಲ್ಲಿ ಮಾತ್ರವಲ್ಲ, ವಿದೇಶಗಳ ಬೆಂಬಲ ವಿಚಾರದಲ್ಲೂ ಭಾರತ ಪಾಕಿಸ್ತಾನಕ್ಕಿಂತ ಒಂದು ಕೈ ಮೇಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿಗಣತಿಗೆ ವಿಕಲಚೇತನರ ಬಳಕೆ: ಬಿವೈ ವಿಜಯೇಂದ್ರ ಆಕ್ಷೇಪ

ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆ ತಂದಿರುವ ಗ್ಯಾರಂಟಿ:ರಣದೀಪ ಸುರ್ಜೇವಾಲ

ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ: ಡಾ.ಅಶ್ವತ್ಥನಾರಾಯಣ್

ಮಕ್ಕಳ ಸರಣಿ ಸಾವಿನ ಹಿನ್ನಲೆ: ಕೋಲ್ಡ್ರಿಫ್ ಮಕ್ಕಳ ಸಿರಪ್ ಗೆ ಕರ್ನಾಟಕದಲ್ಲೂ ನಿಷೇಧ

ಜಾತಿ ಸಮೀಕ್ಷೆ ಪ್ರಶ್ನೆ ಕೇಳುವಾಗ ಡಿಕೆ ಶಿವಕುಮಾರ್ ಗರಂ: ಪ್ರಶ್ನೆ ತಯಾರಿಸಿದ್ದು ಯಾರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments