Select Your Language

Notifications

webdunia
webdunia
webdunia
webdunia

ನಾನು ನೀರಾವರಿ ಖಾತೆ ಬೇಕೆಂದು ಸಿಎಂ ಮೇಲೆ ಒತ್ತಡ ಹೇರಲಿಲ್ಲ- ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ನಾನು ನೀರಾವರಿ ಖಾತೆ ಬೇಕೆಂದು ಸಿಎಂ ಮೇಲೆ ಒತ್ತಡ ಹೇರಲಿಲ್ಲ- ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ನವದೆಹಲಿ , ಬುಧವಾರ, 18 ಡಿಸೆಂಬರ್ 2019 (13:00 IST)
ನವದೆಹಲಿ : ನಾನು ನೀರಾವರಿ ಖಾತೆ ಬೇಕೆಂದು ಸಿಎಂ ಮೇಲೆ ಒತ್ತಡ ಹೇರಲಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.



ಜಲಸಂಪನ್ಮೂಲ ಖಾತೆಯ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಹಾಗೂ  ಬಸವರಾಜ ಬೊಮ್ಮಾಯಿ ಅವರ ನಡುವೆ ಪೈಪೋಟಿ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ನೀರಾವರಿ ಖಾತೆ ಬೇಕೆಂದು ಕೇಳಿಲ್ಲ. ಆ ಬಗ್ಗೆ ಚರ್ಚೆ ಆಗಿಲ್ಲ. ಯಾವ ಖಾತೆ ಯಾರಿಗೆ ಕೊಡಬೇಕೆಂಬುದು ಸಿಎಂ ನಿರ್ಧಾರ. ನಾನು ಅವರ ಮೇಲೆ ಒತ್ತಡ ಹೇರಿಲ್ಲ ಎಂದು ಹೇಳಿದ್ದಾರೆ.


ಹಾಗೇ ಇಂದು ಕೇಂದ್ರ ಹಣಕಾಸು ಸಚಿವರ ಜತೆ ಇಂದು ಮಹತ್ವದ ಸಭೆ ಇದೆ. ಹೈದರಾಬಾದ್ ಕರ್ನಾಟಕ, ರಾಜ್ಯದ ಹಿಂದುಳಿದ ಪ್ರದೇಶಗಳು ಹಾಗೂ ಬೆಂಗಳೂರಿಗೆ ಹೆಚ್ಚಿನ ಅನುದಾನವನ್ನು ನೀಡುವಂತೆ ಕೇಳುತ್ತೇನೆ. 2 ನೀರಾವರಿ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಪ್ರವಾಹ ಪರಿಹಾರಕ್ಕೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುತ್ತೇವೆ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಂತೆಯಲ್ಲಿ 126 ಕುರಿ ಖರೀದಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್