Select Your Language

Notifications

webdunia
webdunia
webdunia
webdunia

ನಾನೂ ಅಲಹಾಬಾದಿ ಗೂಂಡಾ: ರಾಜ್‌ ಠಾಕ್ರೆಗೆ ನಿವೃತ್ತ ನ್ಯಾಯಮೂರ್ತಿ ಕಾಟ್ಜು ಟಾಂಗ್

ನಾನೂ ಅಲಹಾಬಾದಿ ಗೂಂಡಾ: ರಾಜ್‌ ಠಾಕ್ರೆಗೆ ನಿವೃತ್ತ ನ್ಯಾಯಮೂರ್ತಿ ಕಾಟ್ಜು ಟಾಂಗ್
ಮುಂಬೈ , ಗುರುವಾರ, 20 ಅಕ್ಟೋಬರ್ 2016 (15:35 IST)
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಿರ್ಮಾಣದ ಏ ದಿಲ್ ಹೈ ಮುಷ್ಕಿಲ್ ಚಿತ್ರ ಬಿಡುಗಡೆಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಬೆದರಿಕೆಯೊಡ್ಡಿದ್ದರಿಂದ, ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ್ ಕಾಟ್ಜು ಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಬಾಲಿವುಡ್ ಚಿತ್ರಗಳಲ್ಲಿ ಪಾಕಿಸ್ತಾನ ಕಲಾವಿದರಿಗೆ ನಟಿಸಲು ಅವಕಾಶ ನೀಡಿದಲ್ಲಿ ಚಿತ್ರಗಳನ್ನು ಬಹಿಷ್ಕರಿಸಲಾಗುವುದು ಎಂದು ಈಗಾಗಲೇ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಎಚ್ಚರಿಕೆಯ ಸಂದೇಶ ರವಾನಿಸಿದೆ. 
 
ಮಾಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ಅರಬ್ಬಿ ಸಮುದ್ರದ ನೀರಿನಲ್ಲಿ ಮಿಂದು ಅಲ್ಕೋಹಾಲ್ ಸೇವಿಸಿ ಗಲಾಟೆ ಮಾಡುವುದು ದೊಡ್ಡ ಸಾಧನೆಯಲ್ಲ. ತಾಕತ್ತಿದ್ರೆ ನನ್ನ ವಿರುದ್ಧ ಬನ್ನಿ ಅವಾಗ ತೋರಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
 
ನಾನು ಅಲಹಾಬಾದಿನ ಸಂಗಮ್‌ದಲ್ಲಿ ಗಂಗಾ ನದಿಯ ನೀರು ಕುಡಿದಿದ್ದೇನೆ. ನಾನೊಬ್ಬ ಅಲಹಾಬಾದಿ ಗೂಂಡಾ ದಮ್ಮಿದ್ದರೆ ನನ್ನೊಂದಿಗೆ ಸಮರಕ್ಕೆ ಬನ್ನಿ ಎಂದು ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ್ ಕಾಟ್ಜು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರ ಹೆಸರು ಹೇಳಲು ತಡಬಡಾಯಿಸಿದ ಸಿಎಂ ಸಿದ್ದರಾಮಯ್ಯ