Select Your Language

Notifications

webdunia
webdunia
webdunia
webdunia

ರಾಜ್ಯಪಾಲರ ಹೆಸರು ಹೇಳಲು ತಡಬಡಾಯಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯಪಾಲರ ಹೆಸರು ಹೇಳಲು ತಡಬಡಾಯಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಗುರುವಾರ, 20 ಅಕ್ಟೋಬರ್ 2016 (15:31 IST)
ಪೊಲೀಸ್ ಇಲಾಖೆಯ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯನವರು ರಾಜ್ಯಪಾಲ ವಜುಭಾಯಿ ವಾಲಾ ಎನ್ನಲು ತಡಬಡಾಯಿಸಿ ಗೌರವಾನ್ವಿತ ರೂಡಾವಾಲರೆ ಎಂದು ಭಾಷಣ ಆರಂಭಿಸುವ ಮೂಲಕ ಅಪಹಾಸ್ಯಕ್ಕಿಡಾದರು. 
 
ಗೌರವಾನ್ವಿತ ರೂಡಾವಾಲರೆ ಎಂದು ಭಾಷಣ ಪ್ರಾರಂಭಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯಿ ವಾಲಾ ಎನ್ನಲು ತಡಬಡಾಯಿಸಿ ಕೊನೆಗೆ ಹೆಸರನ್ನೆ ಹೇಳದೆ ಕೇವಲ ರಾಜ್ಯಪಾಲರೇ ಎಂದು ಭಾಷಣ ಮುಂದುವರೆಸಿ, ಕೂಡಲೇ ಇನ್ವೆಟೇಷನ್ ಕೊಡ್ರಿ ಎಂದು ಮಾತು ಮರೆಸಿದರು. 
 
ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತಿಗೆ ಅವಕಾಶ ನೀಡಬಾರದು. ಇದರಿಂದ ಇಲಾಖೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಹೇಳಿದರು. 
 
ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳಿಗೆ ಖಾಸಗಿ ಜೀವನವೇ ಇಲ್ಲ. ಆದರೂ ನಾವು ಈ ವೃತ್ತಿಗೆ ಬಂದಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಸದಾ ಒತ್ತಡವಿರುತ್ತದೆ. ಹೀಗಾಗಿ ಪೊಲೀಸ್‌ರಿಗೆ ಫಿಟ್‌‍ನೆಸ್ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ಕಿವಿಮಾತು ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರ ಸಿಎಂಗಿಂತ 18 ತಿಂಗಳ ಮೊಮ್ಮಗ ಶ್ರೀಮಂತ