Select Your Language

Notifications

webdunia
webdunia
webdunia
webdunia

ಹೈದರಾಬಾದ್ ಎನ್ ಕೌಂಟರ್ ಸ್ವಾಗತಿಸಿದ ಸ್ಯಾಂಡಲ್ ವುಡ್ ಮಂದಿ

ಹೈದರಾಬಾದ್ ಎನ್ ಕೌಂಟರ್ ಸ್ವಾಗತಿಸಿದ ಸ್ಯಾಂಡಲ್ ವುಡ್ ಮಂದಿ
ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2019 (11:36 IST)
ಬೆಂಗಳೂರು: ಪಶುವೈದ್ಯೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಪೊಲೀಸರ ಕ್ರಮಕ್ಕೆ ಸ್ಯಾಂಡಲ್ ವುಡ್ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು ಇಂದು ನಸುಕಿನಲ್ಲಿ ಪೊಲೀಸರು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವು ಅಭಿಪ್ರಾಯಗಳು ಕೇಳಿಬರುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ಅಂತೂ ಆ ಸೋದರಿಯ ಸಾವಿಗೆ ನ್ಯಾಯ ದೊರಕಿತು. ಈ ಮೂಲಕ ಈ ಭೂಮಿಯಲ್ಲಿ ಇನ್ನೂ ಸತ್ಯಕ್ಕೆ ಜಯವಿದೆ ಎನ್ನುವುದನ್ನು ನಿರೂಪಿಸಿದೆ ಎಂದು ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇವರಲ್ಲದೆ ನಟಿ ರಕ್ಷಿತಾ, ತಾರಾ, ವೈಷ್ಣವಿ ಗೌಡ, ಅನುಶ್ರೀ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ತಾರೆಯರು ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಶುವೈದ್ಯೆ ಪ್ರಕರಣದ ಆರೋಪಿಗಳ ಎನ್ ಕೌಂಟರ್; ಪೊಲೀಸರನ್ನು ಕೊಂಡಾಡಿದ ಟಾಲಿವುಡ್ ಸಿನಿಮಾ ತಾರೆಯರು