Webdunia - Bharat's app for daily news and videos

Install App

ಮೊದಲರಾತ್ರಿ ರಕ್ತಸ್ರಾವವಾಗದಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಪತಿ

Webdunia
ಶನಿವಾರ, 30 ಮಾರ್ಚ್ 2019 (09:37 IST)
ಮಹಾರಾಷ್ಟ್ರ : ಮೊದಲರಾತ್ರಿ ಪತ್ನಿಗೆ ರಕ್ತಸ್ರಾವವಾಗದಿದ್ದಕ್ಕೆ ಆಕೆ ಕನ್ಯತ್ವ ಕಳೆದುಕೊಂಡಿದ್ದಾಳೆ ಎಂದು ಪತಿಯೊಬ್ಬ ಆಕೆಗೆ ವಿಚ್ಛೇದನ ನೀಡಲು ಮುಂದಾದ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ.


ವಿದ್ಯಾವಂತ, ಉತ್ತಮ ಸಂಬಳ ಪಡೆಯುತ್ತಿರುವ ನಾಸಿಕದ ಹುಡುಗನೊಬ್ಬ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಹುಡುಗಿಯರು ವರ್ಜಿನ್ ಆಗಿರುತ್ತಾರೆಂಬ ಕಾರಣದಿಂದ ಗ್ರಾಮೀಣ ಪ್ರದೇಶದ ಹುಡುಗಿಯೊಂದಿಗೆ ವಿವಾಹವಾಗಿದ್ದಾನೆ. ಮೊದಲ ರಾತ್ರಿ ಪತ್ನಿ ಕನ್ಯತ್ವ ಪರೀಕ್ಷೆಗೆ ಮುಂದಾದ ಪತಿ, ಹಾಸಿಗೆ ಮೇಲೆ ಬಿಳಿ ಬಟ್ಟೆ ಹಾಕಿದ್ದಾನೆ. ಬೆಳಿಗ್ಗೆ ಬಿಳಿ ಬಟ್ಟೆ ಮೇಲೆ ರಕ್ತದ ಕಲೆಯಿರಲಿಲ್ಲ.


ಇದರಿಂದ ಆಕೆ ಕನ್ಯತ್ವ ಕಳೆದುಕೊಂಡಿದ್ದಾಳೆ  ಎಂದು ಕೋಪಗೊಂಡ ಆತ  ಗ್ರಾಮದ ಮುಖಂಡರಿಗೆ ದೂರು ನೀಡಿದ್ದಾನೆ. ಅಲ್ಲಿನ ಮುಖಂಡರು ಕೂಡ ವಿಚ್ಛೇದನಕ್ಕೆ ಅನುಮತಿ ನೀಡಿದ್ದಾರೆ. ಇದನ್ನು ವಿರೋಧಿಸಿದ ಹುಡುಗಿ ಪೊಲೀಸ್ ಠಾಣೆಗೆ ಹೋಗಲು ಮುಂದಾಗಿದ್ದಾಳೆ. ಆದರೆ ಆಕೆಯನ್ನು ಕಟ್ಟಿ ಹಾಕಿದ್ದ ಹುಡುಗನ ಕಡೆಯವರು ಹಿಂಸೆ ನೀಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments