Select Your Language

Notifications

webdunia
webdunia
webdunia
webdunia

ಕರ್ವಾ ಚೌತ್ ದಿನ ಪತ್ನಿ ಉಪವಾಸ ಇರಲ್ಲ ಎಂದಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ?

ಕರ್ವಾ ಚೌತ್ ದಿನ ಪತ್ನಿ ಉಪವಾಸ ಇರಲ್ಲ ಎಂದಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ?
ಲಕ್ನೋ , ಸೋಮವಾರ, 29 ಅಕ್ಟೋಬರ್ 2018 (08:33 IST)
ಲಕ್ನೋ: ಕರ್ವ ಚೌತ್ ಎಂದರೆ ಉತ್ತರ ಭಾರತದಲ್ಲಿ ಭೀಮನ ಅಮವಾಸ್ಯೆ ಇದ್ದಂತೆ. ಗಂಡನ ಶ್ರೇಯಸ್ಸಿಗಾಗಿ ಪತ್ನಿ ಉಪವಾಸ ವ್ರತ ನಡೆಸಿ ಪೂಜೆ ಮಾಡುವ ಈ ಪದ್ಧತಿ ಈ ದಂಪತಿ ಪಾಲಿಗೆ ಮಾರಕವಾಗಿದೆ.

ಉತ್ತರ ಪ್ರದೇಶದಲ್ಲಿ ಪತ್ನಿ ಕರ್ವ ಚೌತ್ ದಿನ ಉಪವಾಸವಿರಲ್ಲ ಎಂದಿದ್ದಕ್ಕೆ 21 ವರ್ಷದ ಪತಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ನಡೆದಿದೆ. ತನ್ನ ಮನೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಾಲ್ಕು ತಿಂಗಳ ಹಿಂದಷ್ಟೇ ಈ ದಂಪತಿಗೆ ಮದುವೆಯಾಗಿತ್ತು. ಇದು ಇಬ್ಬರಿಗೂ ಮೊದಲ ಕರ್ವ ಚೌತ್ ಆಗಿತ್ತು. ಆದರೆ ಈ ದಿನ ಉಪವಾಸ ವ್ರತ ನಡೆಸುವ ಬಗ್ಗೆ ದಂಪತಿಯಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಕೊನೆಗೂ ಪತ್ನಿ ಉಪವಾಸ ಮಾಡಲಿಲ್ಲವೆಂದು ಪತಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಈ ಬಗ್ಗೆ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಲವ್​ ಮಾಡುವಂತೆ ಒತ್ತಾಯಿಸಿ ಅಪ್ರಾಪ್ತ ಸೋದರಿಯ ಮೇಲೆ ಹಲ್ಲೆ ಮಾಡಿದ ಯುವಕ