Select Your Language

Notifications

webdunia
webdunia
webdunia
webdunia

ಬಿಸಿಲಿಗೆ ಕಂಗೆಟ್ಟ ಕುದುರೆಯೊಂದು ಜೈಪುರದಲ್ಲಿ ಏನು ಮಾಡಿದೆ ನೋಡಿ..

ಬಿಸಿಲಿಗೆ ಕಂಗೆಟ್ಟ ಕುದುರೆಯೊಂದು ಜೈಪುರದಲ್ಲಿ ಏನು ಮಾಡಿದೆ ನೋಡಿ..
ಜೈಪುರ , ಸೋಮವಾರ, 5 ಜೂನ್ 2017 (14:49 IST)
ಜೈಪುರ:ಬಿಸಿಲಧಗೆಯಿಂದ ಕಂಗೆಟ್ಟುಹೋಗಿರುವ ಕುದುರೆಯೊಂದು  ದಿಕ್ಕೆಟ್ಟು ಓಡಿ ಕೊನೆಗೆ ಕಾರಿನ ಮೇಲೆ ಜಂಪ್ ಮಾಡಿ, ಮುಂದಿನ ಗ್ಲಾಸ್‌ ಒಡೆದು ಒಳಗೆ ನುಗ್ಗಿದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
 
ಟಾಂಗಾ ವಾಲಾ ಕಟ್ಟಿದ್ದ ಕುದುರೆಯೊಂದು ಮಧ್ನಾಹ್ನ ಸುಡು ಬಿಸಿಲಿಗೆ ಹೈರಾಣಾಗಿ, ತಾಪಮಾನ ತಾಳದೆ ದಿಕ್ಕೆಟ್ಟು ಓಡಲಾರಂಭಿಸಿದೆ. ಈ ವೇಳೆ ರಸ್ತೆಯಲ್ಲಿನ ಬೈಕ್‌ಗಳಿಗೆ ಕುದುರೆ ಡಿಕ್ಕಿ ಹೊಡೆದು ಬಳಿಕ ಬರುತ್ತಿದ್ದ ಕಾರಿನ ಮೇಲೆ ಜಂಪ್ ಮಾಡಿದೆ. ಪರಿಣಾಮ ಕಾರಿನ ಮುಂದಿನ ಗ್ಲಾಸ್ ಒಡೆದು ಕುದುರೆ ಕಾರೊಳಗೆ ನುಗ್ಗಿದೆ. 
 
ಸಧ್ಯ ಸ್ಥಳೀಯರು ಕಾರೊಳಗೆ ಸಿಲುಕಿದ್ದ ಕುದುರೆಯನ್ನು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಪಂಕಜ್ ಜೋಶಿಗೆ ಗಾಯಗಳಾಗಿವೆ. ಕುದುರೆಯೂ ಗಾಯಗೊಂಡಿದೆ. ಬಿಸಿಲ ಝಳ ಮನುಷ್ಯನನ್ನೇ ಬಸವಳಿಯುವಂತೆ ಮಾಡಿದೆ. ಇನ್ನು ಮೂಕಪ್ರಾಣಿಗಳ ವೇದನೆ ದೇವರಿಗೆ ಪ್ರೀತಿ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡರ ವಿರುದ್ಧವೇ ಈಶ್ವರಪ್ಪ ಪರೋಕ್ಷ ವಾಗ್ದಾಳಿ