Select Your Language

Notifications

webdunia
webdunia
webdunia
webdunia

ಬಿಜೆಪಿ ಮುಖಂಡರ ವಿರುದ್ಧವೇ ಈಶ್ವರಪ್ಪ ಪರೋಕ್ಷ ವಾಗ್ದಾಳಿ

ಬಿಜೆಪಿ ಮುಖಂಡರ ವಿರುದ್ಧವೇ ಈಶ್ವರಪ್ಪ ಪರೋಕ್ಷ ವಾಗ್ದಾಳಿ
ಬೆಂಗಳೂರು , ಸೋಮವಾರ, 5 ಜೂನ್ 2017 (13:39 IST)
ಬೇರೆ ಪಕ್ಷದಿಂದ ಬರೋರು ಕೇವಲ ಅಧಿಕಾರಕ್ಕಾಗಿ ಬರ್ತಾರೆ ಎಂದು ಪಕ್ಷಾಂತರಿಗಳ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
 
ವಿಧಾನಪರಿಷತ್‌ನ ಅಧಿವೇಶನದಲ್ಲಿ ವಿಮಲಾಗೌಡರಿಗೆ ಶೃದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡರ ವಿರುದ್ಧವೇ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡು ಘಟನೆ ನಡೆಯಿತು.
 
ಅಂದು ನಾನು ರಾಜಕೀಯಕ್ಕೆ ಪ್ರವೇಶಿಸಿದಾಗ ಹಿರಿಯ ನಾಯಕಿ ವಿಮಲಾಗೌಡ ನನ್ನ ವಿರುದ್ಧ ಸೋಲನುಭವಿಸಿದ್ದರು. ಅವರಿಗೆ ಧೈರ್ಯದಿಂದಿರುವಂತೆ ಹೇಳಲು ಅವರ ಮನೆಗೆ ತೆರಳಿದ್ದೆ. ಆಗ ಅವರು ನಾನು ಸೋತಿದ್ದರಿಂದ ಬೇಜಾರಾಗಿಲ್ಲ. ಆದರೆ, ನಮ್ಮವರೇ ನನ್ನನ್ನು ಸೋಲಿಸಿರುವುದು ನೋವು ತಂದಿದೆ ಎಂದು ಹೇಳಿದ್ದರು. 
 
ಇಂದು ಕೂಡಾ ಅಷ್ಟೆ ಬೇರೆಯವರು ಪಕ್ಷ ಸೇರ್ಪಡೆಯಾಗಲು ಬರುವುದು ಪಕ್ಷ ಕಟ್ಟುವುದಕ್ಕಲ್ಲ. ಕೇವಲ ಅಧಿಕಾರ ಅನುಭವಿಸಲು ಮಾತ್ರ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಪಕ್ಷದಲ್ಲಿನ ವಿರೋಧಿಗಳ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಕುದುರೆ ಜೊತೆ ಸಂಭೋಗ ನಡೆಸಿ ಸಿಕ್ಕಿಬಿದ್ದ ಯುವಕ.. ಮುಂದೇನಾಯ್ತು ಗೊತ್ತಾ..?