Select Your Language

Notifications

webdunia
webdunia
webdunia
webdunia

ವಿಧಾನಸಭೆ ಚುನಾವಣೆ ಸ್ಪರ್ಧೆ: ಗೋವಾ, ಹಿಮಾಚಲ್, ಮಧ್ಯಪ್ರದೇಶ, ಕರ್ನಾಟಕದ ಮೇಲೆ ಆಪ್ ಕಣ್ಣು

ಆಮ್ ಆದ್ಮಿ ಪಾರ್ಟಿ
ದೆಹಲಿಯ ಗೆಲುವಿನಿಂದ ಉತ್ತೇಜತಗೊಂಡಿರುವ ಆಮ್ ಆದ್ಮಿ ಪಕ್ಷ ಪಂಜಾಬ್ ನಂತರ ಗೋವಾ, ಹಿಮಾಚಲ ಪ್ರದೇಶ, ಕರ್ನಾಟಕ ಮತತ್ು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಹೊಂದಿದೆ. ಆಯಾ ರಾಜ್ಯಗಳ ಸ್ಥಳೀಯ ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕದ ನಂತರ ಇತರ ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಇತರ ರಾಜ್ಯಗಳಲ್ಲಿ ಸ್ಪರ್ಧಿಸುವಂತೆ ಪಕ್ಷದ ಪದಾಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ, ಚುನಾವಣೆಯಲ್ಲಿ ಗೆಲ್ಲುವ ಅವಕಾಶಗಳಿದ್ದಲ್ಲಿ ಮಾತ್ರ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
 
ಯಾವುದೇ ರಾಜ್ಯದಲ್ಲಿ 50: 50 ರಷ್ಟು ಗೆಲ್ಲುವ ಅವಕಾಶಗಳಿದ್ದಲ್ಲಿ ಸ್ಪರ್ಧಿಸುವುದು ಉತ್ತಮ, ಸೋಲು ಗೆಲುವು ದೇವರ ಕೈಯಲ್ಲಿದೆ. ಆದರೆ, 100 ಸೀಟುಗಳಲ್ಲಿ ಸ್ಪರ್ಧಿಸಿದಲ್ಲಿ ಕನಿಷ್ಠ 90 ಸೀಟುಗಳಲ್ಲಿ ಗೆಲ್ಲುವ ಅವಕಾಶವಿರಬೇಕು ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ಬರದ ಬಗ್ಗೆ ಸರಕಾರಕ್ಕೆ ಸ್ವಲ್ಪವು ಗಂಭೀರತೆಯಿಲ್ಲ: ಯಡಿಯೂರಪ್ಪ